
ಕೊರೋನಾ ಕಾಟ: ಬಳ್ಳಾರಿಯ ಜಿಂದಾಲ್ ಈಗ ಕೊರೋನಾ ಕಾರ್ಖಾನೆ..!
ಕಂಪನಿಯ ಪ್ರೈಮರಿ ಕಾಂಟಾಕ್ಟ್ನಿಂದ ಒಬ್ಬರಿಂದ ಒಬ್ಬರಿಗೆ ವೈರಸ್| ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ನೌಕರರಿಂದ ಅವರವರ ಕುಟುಂಬದ 13 ಮಂದಿಗೆ ಕೊರೋನಾ ದೃಢ| ಬಳ್ಳಾರಿ, ಹೊಸಪೇಟೆ, ಕಂಪ್ಲಿ ಜನರಿಗೂ ಕೊರೋನಾ ಕಾಟ|
ಬಳ್ಳಾರಿ(ಜೂ.10): ನಾಲ್ಕು ದಿನಗಳ ಹಿಂದೆ ಜಿಂದಾಲ್ ಕಾರ್ಖಾನೆಯಲ್ಲಿ ಕೇವಲ ಒಂದು ಕೊರೋನಾ ಪ್ರಕರಣ ಇದ್ದಿದ್ದು, ಸದ್ಯ 13 ಕೇಸ್ಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯ ಜನರು ಮತ್ತಷ್ಟು ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪನಿಯ ಪ್ರೈಮರಿ ಕಾಂಟಾಕ್ಟ್ನಿಂದ ಒಬ್ಬರಿಂದ ಒಬ್ಬರಿಗೆ ವೈರಸ್ ಅಂಟುತ್ತಿದೆ.
Add Asianetnews Kannada as a Preferred Source

ಜುಲೈನಲ್ಲಿ ಮತ್ತಷ್ಟು ಸ್ಫೋಟವಾಗಲಿದೆಯಂತೆ ಕೊರೊನಾ..!
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ನೌಕರರಿಂದ ಅವರವರ ಕುಟುಂಬದ 13 ಮಂದಿಗೆ ಮಹಾಮಾರಿ ಕೊರೋನಾನ ವೈರಸ್ ಅಂಟಿದೆ. ಈ ಮೂಲಕ ಬಳ್ಳಾರಿ, ಹೊಸಪೇಟೆ, ಕಂಪ್ಲಿ ಜನರಿಗೂ ಕೊರೋನಾ ಕಾಟ ಕೊಡಲು ಶುರು ಮಾಡಿದೆ.