Asianet Suvarna News Asianet Suvarna News

ನಾವೂ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ, ಬಸ್ ಯಾಕೆ ನಿಲ್ಲಿಸಲ್ಲ: ರಸ್ತೆಯಲ್ಲಿ ಮಂಗಳಮುಖಿಯರ ರಂಪಾಟ

ಕೈ ಅಡ್ಡ ಹಾಕಿದ್ರೂ ಬಸ್‌ ನಿಲ್ಲಿಸದಕ್ಕೆ, ಬಸ್ ತಡೆದು ಮಂಗಳಮುಖಿಯರು ಬೀದಿ ರಂಪಾಟ ನಡೆಸಿದ್ದಾರೆ.

ಚಿಕ್ಕೋಡಿ: ಕೈ ಮಾಡಿದ್ರೂ ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌ ಬಸ್‌ ನಿಲ್ಲಿಸದ ಹಿನ್ನೆಲೆ ಮಂಗಳಮುಖಿಯರು ರಂಪಾಟ ನಡೆಸಿದ್ದಾರೆ. ಬಸ್‌ ತಡೆದು ಬೀದಿ ರಂಪಾಟ ಮಾಡಿದ್ದಾರೆ. ನಾವು ಕೂಡ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ. ನಮಗ್ಯಾಕೆ ಬಸ್‌ ನಿಲ್ಲಿಸುವುದಿಲ್ಲ ಎಂದು ರಂಪಾಟ ಮಾಡಿದ್ದಾರೆ. ಈ ಘಟನೆ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದಿದೆ. ಹಾರೂಗೇರಿ ಬಸ್ ನಿಲ್ದಾಣದಲ್ಲಿ ಡ್ರೈವರ್‌ನನ್ನು ಮಂಗಳಮುಖಿಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರಿಗೆ ಬಸ್ ನಿಲ್ಲಿಸ್ತೀರಿ ನಮಗ್ಯಾಕೆ ಬಸ್ ನಿಲ್ಲಿಸಲ್ಲ ಎಂದು ಗಲಾಟೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಗಡಿ ವಿವಾದ ಬಳಿಕ, ಮಹದಾಯಿ ವಿಚಾರದಲ್ಲೂ 'ಮಹಾ'ಪುಂಡಾಟ: ಗೋವಾಗೆ ಸಿಎಂ ಶಿಂದೆ ಸಾಥ್‌

Video Top Stories