ಮೆಡಿಕಲ್‌ ಶಾಪ್‌ ಮುಂದೆಯೇ ಕಾದಿದ್ದ ಜವರಾಯ: ಔಷಧಿ ತೆಗೆದುಕೊಳ್ಳಲು ಬಂದಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು..!

ಔಷಧಿ ತೆಗೆದಕೊಳ್ಳಲು ಮೆಡಿಕಲ್‌ ಶಾಪ್‌ಗೆ ಬಂದಿದ್ದ ಜಗದೀಶ್‌ ಎದೆನೋವಿನಿಂದ ಕುಸಿದು ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

First Published Oct 5, 2023, 8:13 PM IST | Last Updated Oct 5, 2023, 8:13 PM IST

ಮೈಸೂರು(ಅ.05):  ಔಷಧಿ ತೆಗೆದಕೊಳ್ಳಲು ಮೆಡಿಕಲ್‌ ಶಾಪ್‌ಗೆ ಬಂದಿದ್ದ ವ್ಯಕ್ತಿಯೋರ್ವನಿಗೆ ಹೃದಯಾಘಾತವಾಗಿ ಅಂಗಡಿ ಮುಂದೆಯೇ ಮೃತಪಟ್ಟ ಘಟನೆ ನಗರದಲ್ಲಿ ಇಂದು(ಗುರುವಾರ) ನಡೆದಿದೆ.  38 ವರ್ಷದ ಜಗದೀಶ್‌ ಎಂಬುವರೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಔಷಧಿ ತೆಗೆದಕೊಳ್ಳಲು ಮೆಡಿಕಲ್‌ ಶಾಪ್‌ಗೆ ಬಂದಿದ್ದ ಜಗದೀಶ್‌ ಎದೆನೋವಿನಿಂದ ಕುಸಿದು ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಜಗದೀಶ್‌ ಕ್ಯಾತಮಾರನಹಳ್ಳಿಯಲ್ಲಿ ಚಿಕನ್‌ ಅಂಗಡಿ ನಡೆಸುತ್ತಿದ್ದರು ಅಂತ ತಿಳಿದು ಬಂದಿದೆ. ನಗರದ ಉದಯಗಿರಿ ಮೆಡಿಕಲ್‌ ಶಾಪ್‌ ಮುಂದೆ ಈ ಘಟನೆ ನಡೆದಿದೆ. 

ರಾಜ್ಯ ರಾಜಕೀಯದ ದೊಡ್ಡ ದುಷ್ಮನಿ ಪುನಾರಂಭ: ವಾರ್ನಿಂಗ್ ಕೊಟ್ಟ ದೊಡ್ಡಗೌಡ್ರಿಗೆ ಚರಿತ್ರೆ ನೆನಪಿಸಿದ ಡಿಕೆಶಿ