ರಾಜ್ಯ ರಾಜಕೀಯದ ದೊಡ್ಡ ದುಷ್ಮನಿ ಪುನಾರಂಭ: ವಾರ್ನಿಂಗ್ ಕೊಟ್ಟ ದೊಡ್ಡಗೌಡ್ರಿಗೆ ಚರಿತ್ರೆ ನೆನಪಿಸಿದ ಡಿಕೆಶಿ

ಲೋಕಸಭಾ ಚುನಾವಣೆಗೂ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಪಿಎಂ ದೇವೇಗೌಡರ ನಡುವೆ ರಾಜಕೀಯ ವೈರತ್ವ ಜೋರಾಗಿದೆ.

First Published Oct 5, 2023, 3:01 PM IST | Last Updated Oct 5, 2023, 3:01 PM IST

ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ಶುರುವಾಯ್ತು ರಾಜ್ಯ ರಾಜಕೀಯದ ಅತೀ ದೊಡ್ಡ ದುಷ್ಮನಿ..! ಮಿಸ್ಟರ್ ಡಿಕೆ.., ಎಚ್ಚರ ಅಂತ ಗುಡುಗಿದ್ರು ದೇವೇಗೌಡ್ರು... ಯಾರಿಗೆ ಹೆದರಿಸ್ತಾ ಇದ್ದೀರಾ ಅಂತ ಕೌಂಟರ್ ಕೊಟ್ರು ಡಿಕೆ ಶಿವಕುಮಾರ್. ಸಣ್ಣ ಕದನ ವಿರಾಮದ ನಂತ್ರ ಮತ್ತೆ ಕೆರಳಿ ನಿಂತ ಹಳೇ ದ್ವೇಷದ ಕಥೆ. ಡಿಕೆ ವಿರುದ್ಧ ಅಬ್ಬರಿಸಿದ್ದೇಕೆ ದೊಡ್ಡಗೌಡ್ರು..? ಚರಿತ್ರೆ ನೆನಪಿಸಿ ತಿರುಗಿ ಬಿದ್ದದ್ದೇಕೆ ಕನಕಪುರ ಬಂಡೆ..? ದೇವೇಗೌಡ್ರು ಮತ್ತು ಡಿಕೆ ಶಿವಕುಮಾರ್ ನಡುವಿನ ಹಳೇ ರಾಜಕೀಯ ದ್ವೇಷ ಮತ್ತೆ ಧಗಧಗಿಸ್ತಾ ಇದೆ. ವಾರ್ನಿಂಗ್ ಕೊಟ್ಟ ಗೌಡ್ರಿಗೆ, ಕನಕಪುರ ಸ್ಟೈಲ್'ನಲ್ಲೇ ಡಿಕೆ ಉತ್ತರ ಕೊಟ್ಟಿದ್ದಾರೆ. ದೇವೇಗೌಡ್ರು ಮತ್ತು ಡಿಕೆ ಶಿವಕುಮಾರ್ ನಡುವಿನ ರಾಜಕೀಯ ದ್ವೇಷಕ್ಕೆ 37 ವರ್ಷಗಳ ಇತಿಹಾಸ. ದೇವೇಗೌಡ್ರು ಮತ್ತು ಡಿಕೆ ಶಿವಕುಮಾರ್ ನಡುವಿನ ರಾಜಕೀಯ ದುಷ್ಮನಿಯ ಮೂಲವೇ ಒಕ್ಕಲಿಗ ನಾಯಕತ್ವ. ಈಗ ಹಳೇ ದ್ವೇಷ  ಮತ್ತೆ ಭುಗಿಲೆದ್ದು ನಿಂತಿರೋದೂ ಅದೇ ಕಾರಣಕ್ಕೆ ಎನ್ನುವುದು ತಿಳಿಯುತ್ತದೆ.