Asianet Suvarna News Asianet Suvarna News

ಈ ಒಂದು ವೀಕ್ನೆಸ್ ಬಗೆಹರಿಸಿಕೊಳ್ಳದಿದ್ದರೆ RCB ತಂಡಕ್ಕೆ ಅಪಾಯ ಗ್ಯಾರಂಟಿ..!

ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 10 ರನ್‌ಗಳಿಂದ ಗೆಲುವಿನ ಖಾತೆ ತೆರೆದಿದ್ದ ಆರ್‌ಸಿಬಿ ಆ ಬಳಿಕ ಕಿಂಗ್ಸ್‌ ಇಲೆವನ್‌ ಪಂಜಾಬ್‌ಗೆ ಶರಣಾಗಿತ್ತು. ನಂತರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ವಿರಾಟ್ ಪಡೆ ದಿಗ್ವಿಜಯ ಸಾಧಿಸಿದೆ.
 

ಬೆಂಗಳೂರು(ಅ.05): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಇಂದು ಡೆಲ್ಲಿ ವಿರುದ್ಧವೂ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 10 ರನ್‌ಗಳಿಂದ ಗೆಲುವಿನ ಖಾತೆ ತೆರೆದಿದ್ದ ಆರ್‌ಸಿಬಿ ಆ ಬಳಿಕ ಕಿಂಗ್ಸ್‌ ಇಲೆವನ್‌ ಪಂಜಾಬ್‌ಗೆ ಶರಣಾಗಿತ್ತು. ನಂತರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ವಿರಾಟ್ ಪಡೆ ದಿಗ್ವಿಜಯ ಸಾಧಿಸಿದೆ.

IPL 2020: ರೋಹಿತ್ ಪಡೆ ಸನ್‌ರೈಸರ್ಸ್‌ಗೆ ಶಾಕ್ ಕೊಟ್ಟಿದ್ದು ಹೇಗೆ?

ಮೇಲ್ನೋಟಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿಯೇ ಗುರುತಿಸಿಕೊಂಡಿದೆ. ಆದರೆ ಒಂದು ವಿಭಾಗದಲ್ಲಿ ಮಾತ್ರ ಸಾಕಷ್ಟು ಪರದಾಡುತ್ತಿದೆ. ಈ ಒಂದು ಸಮಸ್ಯೆಗೆ ವಿರಾಟ್‌ ಪಡೆ ಪರಿಹಾರ ಕಂಡುಕೊಳ್ಳದಿದ್ದರೆ, ಪ್ರಶಸ್ತಿ ಗೆಲ್ಲುವುದಿರಲಿ ಪ್ಲೇ ಆಫ್ ಹಂತ ಪ್ರವೇಶಿಸುವ ಹಾದಿ ಕೂಡಾ ಕಠಿಣವಾಗಿರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ