Asianet Suvarna News Asianet Suvarna News

ದೆಹಲಿಗೆ ವರುಣನ ವಕ್ರದೃಷ್ಟಿ: ಜನತೆಗೆ ಮತ್ತೆ ಪ್ರವಾಹದ ಭೀತಿ..!

ದೆಹಲಿ ಹಾಗೂ ನೆರೆ ರಾಜ್ಯಗಳಲ್ಲಿ ಮತ್ತೆ ಮಳೆಯಾಗುತ್ತಿದೆ. ಹೀಗಾಗಿ ಪ್ರವಾಹದ ಭೀತಿ ಎದುರಾಗಿದೆ.
 

First Published Jul 16, 2023, 9:42 AM IST | Last Updated Jul 16, 2023, 9:42 AM IST

ನವದೆಹಲಿ: ದೆಹಲಿಯಲ್ಲಿ ಯಮುನೆ ಪ್ರವಾಹ (yamune flood ) ಇಳಿಯುತ್ತಿದ್ದರೂ, ವರುಣ ವಕ್ರ ದೃಷ್ಟಿ ಮಾತ್ರ ತಪ್ಪಿಲ್ಲ. ದಹೆಲಿ (Delhi)ಹಾಗೂ ನೆರೆ ರಾಜ್ಯಗಳಲ್ಲಿ ಮಳೆ ಮುಂದುವರೆದಿದೆ. ಹಿಮಾಚಲ ಪ್ರದೇಶ, ದೆಹಲಿ, ಉತ್ತರಾಖಂಡ್‌ನಲ್ಲಿ ಮಳೆಯಾಗುತ್ತಿದೆ.ದೆಹಲಿ ಸೇರಿದಂತೆ ಆರು ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಹೀಗಾಗಿ ದೆಹಲಿ ಜನರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಇನ್ನೂ ಪ್ರಧಾನಿ ಮೋದಿ (Prime Minister Modi) ದೆಹಲಿಯಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಲೆಫ್ಟಿನೆಂಟ್‌ ಗವರ್ನರ್‌ಗೆ ಕರೆ ಮಾಡಿ ಪ್ರವಾಹದ ಬಗ್ಗೆ ಮಾಹಿತಿಯನ್ನು ಪಡೆದು, ಇದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಪ್ರವಾಹದಿಂದಾಗಿ ಎಷ್ಟೋ ಜನ ಮನೆ ಬಿಟ್ಟು ಹೊರಬಂದಿದ್ದಾರೆ.

ಇದನ್ನೂ ವೀಕ್ಷಿಸಿ: ಟೊಮೆಟೋ ಹಣ್ಣಿನ ರಾಶಿ ಮಧ್ಯದಲ್ಲಿ ಸರ್ಪರಾಜ: ಮುಟ್ಟಲು ಹೋದವರನ್ನೇ ಕಚ್ಚಲು ಬಂದ ಹಾವು..!