
ಮಂದಿರ ಉದ್ಘಾಟನೆಯಲ್ಲಿ ರಾಜಕೀಯ ಮಾಡುತ್ತಿರುವವರು ಯಾರು..?
ಎಲ್ರಿಗೂ ಗೊತ್ತಿರುವ ಹಾಗೆ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಮಂದಿರ ಉದ್ಘಾಟನೆಯ ಕಾರ್ಯಕ್ರಮ ದೇಶದಲ್ಲಿ ರಾಜಕೀಯವಾಗಿ ತುಂಬಾನೇ ಚರ್ಚೆಯಾಗುತ್ತಿದೆ. ದೇಗುಲ ಉದ್ಘಾಟನೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಈ ರಾಜಕೀಯ ಮಾಡ್ತಿರೋದ್ಯಾರು. ಇಲ್ಲಿದೆ ಡಿಟೇಲ್ಡ್ ಸ್ಟೋರಿ.
ಎಲ್ರಿಗೂ ಗೊತ್ತಿರುವ ಹಾಗೆ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಮಂದಿರ ಉದ್ಘಾಟನೆಯ ಕಾರ್ಯಕ್ರಮ ದೇಶದಲ್ಲಿ ರಾಜಕೀಯವಾಗಿ ತುಂಬಾನೇ ಚರ್ಚೆಯಾಗುತ್ತಿದೆ. ಬಿಜೆಪಿ ಹೊರತು ಪಡಿಸಿ ದೇಶದಲ್ಲಿರುವ ಇತರೇ ಪಕ್ಷಗಳು ಮಂದಿರ ಉದ್ಘಾಟನೆ ಕುರಿತು ಅಸಂತುಷ್ಟ ಭಾವನೆ ವ್ಯಕ್ತ ಪಡಿಸುತ್ತಿವೆ. ಇದಕ್ಕಿಂತ ಹೆಚ್ಚಾಗಿ ಇತ್ತ ವಿರೋಧಿಸಲೂ ಆಗದೇ ಅತ್ತ ಪೂಜಿಸಲೂ ಆಗದೆ ಸಂಕಷ್ಟದ ಸ್ಥಿತಿಯಲ್ಲಿ ಕೆಲವು ರಾಜಕೀಯ ಪಕ್ಷಗಳಿವೆ. ಹೀಗೆ ಬೇಸರದಲ್ಲಿರುವ ಕೆಲ ರಾಜಕೀಯ ಪಕ್ಷಗಳು ರಾಮ ಮಂದಿರ ಉದ್ಘಾಟನೆ ದಿನ ಅಯೋಧ್ಯೆಗೆ ಹೋಗುವುದಿಲ್ಲವಂತೆ. ಬದಲಾಗಿ ಬೇರೆ ಬೇರೆ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರಂತೆ. ಹಾಗಿದ್ರೆ ಜನವರಿಗೆ 22ರಂದು ಅಯೋಧ್ಯೆಗೆ ಹೋಗದವರು ಎಲ್ಲಿ ಯಾವ ದೇವಸ್ಥಾನ ಪೂಜೆಯಲ್ಲಿ ಪಾಲ್ಗೊಳಲ್ಲಿದ್ದಾರೆ ಅನ್ನೋದನ್ನು ನೋಡೋದೇ ಈ ಕ್ಷಣದ ವಿಶೇಷ ಓ ಮೈ ಗಾಡ್.
Add Asianetnews Kannada as a Preferred Source
