ಫ್ರೀ ಸ್ಕೀಂ ಅಪಾಯದ ಎಚ್ಚರಿಕೆ ಕೊಟ್ಟ ಪ್ರಧಾನಿ: ಏನಿದು ಮೋದಿ ಹೇಳಿದ ರೇವ್ಡಿ ಜಾಗೃತಿ?

‘ಮತ ಗಳಿಸುವ ಉದ್ದೇಶದಿಂದ ಪಕ್ಷಗಳು ಪುಕ್ಕಟೆ ಆಫರ್‌ಗಳನ್ನು ನೀಡುವ ಭರವಸೆಗಳು ದೇಶದ ಅಭಿವೃದ್ಧಿಗೆ ತುಂಬಾ ಮಾರಕ. ಇದರ ವಿರುದ್ಧ ದೇಶದ ಜನರು ಅದರಲ್ಲೂ ವಿಶೇಷವಾಗಿ ಯುವಕರು ಕಡಿವಾಣ ಹಾಕಬೇಕು. ದೇಶದ ರಾಜಕೀಯದಿಂದ ಈ ಸಂಸ್ಕೃತಿಯನ್ನು ತೆಗೆದುಹಾಕಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

‘ಮತ ಗಳಿಸುವ ಉದ್ದೇಶದಿಂದ ಪಕ್ಷಗಳು ಪುಕ್ಕಟೆ ಆಫರ್‌ಗಳನ್ನು (free scheme) ನೀಡುವ ಭರವಸೆಗಳು ದೇಶದ ಅಭಿವೃದ್ಧಿಗೆ ತುಂಬಾ ಮಾರಕ. ಇದರ ವಿರುದ್ಧ ದೇಶದ ಜನರು ಅದರಲ್ಲೂ ವಿಶೇಷವಾಗಿ ಯುವಕರು ಕಡಿವಾಣ ಹಾಕಬೇಕು. ದೇಶದ ರಾಜಕೀಯದಿಂದ ಈ ಸಂಸ್ಕೃತಿಯನ್ನು ತೆಗೆದುಹಾಕಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ- ಹಿಂದ್?

‘ದೇಶದ ಜನರ ಆಶೋತ್ತರಗಳಿಗೆ ಹೊರತಾದ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು. ಕೈಗೆತ್ತಿಕೊಂಡರೆ ಭವಿಷ್ಯವು ಅಂಧಕಾರದಲ್ಲಿ ಮುಳುಗಲಿದೆ. ಆದರೆ ಇಂದು ‘ರೇವಡಿ’ (ಉತ್ತರ ಪ್ರದೇಶದ ಒಂದು ಪ್ರಸಿದ್ಧ ಮಿಠಾಯಿ) ಸಂಸ್ಕೃತಿ ಬೆಳೆಯುತ್ತಿದ್ದು, ಈ ಸಿಹಿ ತಿನಿಸನ್ನು ಪುಕ್ಕಟೆಯಾಗಿ ನೀಡುವ ಆಸೆ ತೋರಿಸಿ ಮತ ಗಳಿಸುವ ಯತ್ನಗಳು ನಡೆಯುತ್ತಿವೆ. ಈ ಸಂಸ್ಕೃತಿಗೆ ದೇಶದ ಜನರು, ಅದರಲ್ಲೂ ಯುವಕರು ಕಡಿವಾಣ ಹಾಕಬೇಕು. ಏಕೆಂದರೆ ಈ ‘ಮಿಠಾಯಿ ಸಂಸ್ಕೃತಿ’ಯಿಂದ ದೇಶದಲ್ಲಿ ಎಕ್ಸ್‌ಪ್ರೆಸ್‌ ಹೆದ್ದಾರಿ, ವಿಮಾನ ನಿರ್ಮಾಣ, ರಕ್ಷಣಾ ಕಾರಿಡಾರ್‌ ನಿರ್ಮಿಸಲು ಆಗದು’ ಎಂದು ಪ್ರಧಾನಿ ಕರೆ ನೀಡಿದ್ದಾರೆ. 

Related Video