
ನಕ್ಸಲ್ ನಾಶಕ್ಕೆ ಮುನ್ನುಡಿ ಬರೆದಿತ್ತು ಅಮಿತ್ ಶಾ ಶಪಥ: ಹೇಗಿತ್ತು ಗೊತ್ತಾ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್?
ನಕ್ಸಲರ ವಿನಾಶಕ್ಕೆ ಗೃಹ ಸಚಿವ ಅಮಿತ್ ಶಾ ಅವರ 2026ರ ಗಡುವಿನೊಂದಿಗೆ, ನಕ್ಸಲರಿಗೆ ಶರಣಾಗತಿ ಅಥವಾ ಮರಣ ಎಂಬ ಎರಡೇ ಆಯ್ಕೆಗಳು ಉಳಿದಿದ್ದು, ನೂರಾರು ನಕ್ಸಲರು ಸಾಮೂಹಿಕವಾಗಿ ಶರಣಾಗುತ್ತಿದ್ದಾರೆ. ಕೇಂದ್ರ ಸರ್ಕಾರದ 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಬಗ್ಗೆ ಇಲ್ಲಿದೆ ಡಿಟೇಲ್ ವೀಡಿಯೋ ಸ್ಟೋರಿ.
ನಮಸ್ತೆ ವೀಕ್ಷಕರೇ.. ದೇಶದಲ್ಲೊಂದು ಅತಿ ಮುಖ್ಯವಾದ ಬದಲಾವಣೆ ಆಗ್ತಾ ಇದೆ.. ಒಂದಲ್ಲಾ ಒಂದಿನ, ಅಂಥದ್ದೊಂದು ಬದಲಾವಣೆ ಬರಬಹುದು ಅನ್ನೋ ಕಲ್ಪನೆ ಕೂಡ ಇರ್ಲಿಲ್ಲ ನಮ್ ಜನಕ್ಕೆ.. ಆದ್ರೆ ಈಗ, ಯಾವುದು ಕನಸಲ್ಲೂ ಸಾಧ್ಯ ಇರ್ಲಿಲ್ವೋ, ಅದು ಸತ್ಯವಾಗ್ತಾ ಇದೆ.. ಅದನ್ನ ನೋಡ್ತಾ ಇದ್ರೆ, ಮೋದಿ ಸರ್ಕಾರ, ಅದರಲ್ಲೂ ಮುಖ್ಯವಾಗಿ, ಅಮಿತ್ ಶಾ ಅವರ ಅದೊಂದು ಶಪಥ, ಅವರು ಕೊಟ್ಟಿದ್ದ ಡೆಡ್ ಲೈನಿಗಿಂತಾ ಮೊದಲೇ ಈಡೇರೋ ಸುಳಿವು ಸಿಕ್ತಾ ಇದೆ.. ಅದೇನು ಶಪಥ? ಅದ್ಯಾವ ಟಾರ್ಗೆಟ್? ನಿಜಕ್ಕೂ ಆಗ್ತಾ ಇರೋದೇನು? ಅಂತ ಯೋಚನೆ ಮಾಡ್ತಾ ಇದೀರಾ? ಅದ್ ಗೊತ್ತಾಗ್ಬೇಕು ಅಂದ್ರೆ ಈ ವೀಡಿಯೋ ನೋಡಿ..