Asianet Suvarna News Asianet Suvarna News

ಮುಡಾ ಪ್ರಕರಣದಿಂದ ಅಲುಗಾಡುತ್ತಿದೆಯಾ ಸರ್ಕಾರದ ಬುಡ? ಕೋರ್ಟ್ ತಾತ್ಕಾಲಿಕ ರಿಲೀಫ್ ಯಾರ ಗೆಲುವು?

ಮುಡಾ ಪ್ರಕರಣ ಹೈಕೋರ್ಟ್ ಮೆಟ್ಟೆಲು ಹತ್ತಿರುವ ಸಿಎಂ ಸಿದ್ದರಾಮಯ್ಯಗೆ 10 ದಿನಗಳ ರಿಲೀಫ್ ಸಿಕ್ಕಿದೆ. ಇಂದು ಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದವೇನು? ರಿಲೀಫ್‌ನಿಂದ ಸಿದ್ದರಾಮಯ್ಯ ಸಂಪೂರ್ಣ ನಿರಾಳವೇ?

First Published Aug 19, 2024, 11:11 PM IST | Last Updated Aug 19, 2024, 11:11 PM IST

ಮುಡಾ ಪ್ರಕರಣ ಇಂದು ಹೈಕೋರ್ಟ್‌ನಲ್ಲಿ ಭಾರಿ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಹೈಕೋರ್ಟ್ ಆಗಸ್ಟ್ 29ಕ್ಕೆ ವಿಚಾರಣೆ ನಡೆಸಲು ನಿರ್ಧರಿಸಿದೆ. 10 ದಿನಗಳ ಕಾಲ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇದೇ ವೇಳೆ ಸೆಷನ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.ಮುಡಾ ಪ್ರಕರಣ ಕರ್ನಾಟಕದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಇದರ ನಡುವೆ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಆದರೆ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.