Asianet Suvarna News Asianet Suvarna News

ಕೊರೋನಾ ನಿರ್ವಹಣೆ; ವಿಪಕ್ಷಗಳಿಗೆ ರಾಜೀವ್ ಚಂದ್ರಶೇಖರ್‌ರಿಂದ ಅಂಕಿ ಅಂಶಗಳ ಪಾಠ

ರಾಜ್ಯಸಭೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಮಾತು/ ಲಾಕ್ ಡೌನ್ ಯಾವ ಕಾರಣಕ್ಕೆ ಅನುಷ್ಠಾನ ಮಾಡಲಾಯಿತು/ ಕಾಂಗ್ರೆಸ್ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ/ ಎಲ್ಲರಿಗೂ ಕೇಂದ್ರ ಸರ್ಕಾರ ಆರೋಗ್ಯ ಸೇವೆ ನೀಡಿದೆ

ನವದೆಹಲಿ( ಸೆ. 17)  ಸಂಸದ ರಾಜೀವ್ ಚಂದ್ರಶೇಖರ್ ಕೊರೋನಾ ವೈರಸ್ ಸವಾಲುಗಳ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದಾರೆ.  ಲಾಕ್ ಡೌನ್ ಯಾವ ಕಾರಣಕ್ಕೆ ಅನುಷ್ಠಾನ ಮಾಡಬೇಕಾಯಿತು ಎಂಬ ವಿಚಾರವನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

ಚೀನಾ ಮಾಡಿದ ಅತಿದೊಡ್ಡ ತಪ್ಪನ್ನು ಜಗತ್ತಿಗೆ ತಿಳಿಸಿದ ರಾಜೀವ್ ಚಂದ್ರಶೇಖರ್

ಲಾಕ್ ಡೌನ್ ಅಗತ್ಯ ಆದರೆ ಪೂರ್ವಸಿದ್ಧತೆಯನ್ನು ಕೇಂದ್ರ ಸರ್ಕಾರ ಮಾಡಿಕೊಂಡಿರಲಿಲ್ಲ ಎಂದು  ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಚಂದ್ರಶೇಖರ್, ಕೇಂದ್ರ ಸರ್ಕಾರ ಯಾವ ಸಂದರ್ಭದಲ್ಲಿಯೂ ಹಿಂದೆ ಬಿದ್ದಿಲ್ಲ. ಎಲ್ಲರಿಗೂ ಆರೋಗ್ಯ ಸೇವೆ ಕಲ್ಪಿಸಿದೆ ಎಂದು ವಿವರಿಸಿದರು. 

ಇದೇ ಸುದ್ದಿಯನ್ನು ಆಂಗ್ಲಭಾಷೆಯಲ್ಲಿಯೂ ಓದಿ