
RIP Lata Mangeshkar:ಕನ್ನಡ ನಾಡಿನೊಂದಿಗೆ ಲತಾ ಫ್ಯಾಮಿಲಿಯ ಬಾಂಧವ್ಯ, ಹಾಡು ಸ್ಮರಿಸಿದ ಶಿವಣ್ಣ
* ಗಾನಕೋಗಿಲೆ ಲತಾ ಮಂಗೇಶ್ಕರ್ ವಿಧಿವಶ
* ಎಲ್ಲ ಬಗೆಯ ಗೀತೆಗಳ ಮೇಲೆ ಹಿಡಿತ
* ದಿವ್ಯ ಚೇತನಕ್ಕೆ ಸಂಗೀತ ನಮನ
* ಎರಡು ದಿನದಲ್ಲಿ ದೇಶದಲ್ಲಿ ಶೋಕಾರಚರಣೆ
ಬೆಂಗಳೂರು (ಫೆ. 6): ಸಂಗೀತ ಲೋಕದ ತಾರೆ, ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಭಾನುವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivaraj Kumar) ಹಾಡಿನ ಮೂಲಕವೇ ನಮನ ಸಲ್ಲಿಸಿದ್ದಾರೆ.
Add Asianetnews Kannada as a Preferred Source

ಸಿಎಂ ಬೊಮ್ಮಾಯಿ ಸಹ ಲತಾ ಅವರ ಹಾಡಿನ ಸಾಲುಗಳನ್ನು ಸ್ಮರಣೆ ಮಾಡಿಕೊಂಡಿದ್ದಾರೆ. ಲತಾ ಸಹೋದರಿ ಉಷಾ ಮಂಗೇಶ್ಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಂತಾಪ ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ 2 ದಿನಗಳ ಕಾಲ ಶೋಕಾಚರಣೆ ನಿರ್ಧಾರ ಮಾಡಲಾಗಿದ್ದು ಯಾವುದೇ ಸಾರ್ವಜನಿಕ ಮತ್ತು ಮನರಂಜನಾ ಕಾರ್ಯಕ್ರಮಕ್ಕೆ ಅವಾಶ ಇಲ್ಲ.