Asianet Suvarna News Asianet Suvarna News

Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

ನುಡಿದಂತೆ ‘ಪುಡಿ’ ಮಾಡ್ತಿರೋ ಬುಲ್ಡೋಜರ್ ಬಾಬಾ..!
ಯೋಗಿ ಬಂದ ಮೇಲೆ ನಡೆದ ಎನ್‌ಕೌಂಟ್‌ಗಳು ಎಷ್ಟು ..?
ಖೈದಿಗಳು ಪೆರೋಲ್ ಬೇಡವೇ ಬೇಡ ಎನ್ನುತ್ತಿರೋದೇಕೆ..?

ಮಾಫಿಯಾವನ್ನ ಮಣ್ಣಲ್ಲಿ ಹೂತು ಹಾಕುತ್ತೇನೆ. ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಸದನದಲ್ಲಿ ಅಬ್ಬರಿಸಿದ ಪರಿ. ನುಡಿದಂತೆ ನಡೆಯುತ್ತಿರೋ ಯೋಗಿ ಆದಿತ್ಯನಾಥ್ ಸರ್ಕಾರ ಡಾನ್‌ಗಳು ಎಂದು ಮೆರೆಯೋರ ಪಾಲಿಗೆ ಅಕ್ಷರಷಃ ಸಿಂಹಸ್ವಪ್ನವಾಗಿದೆ. ವಿಕಾಸ್ ದುಬೆ, ಅತೀಕ್ ಅಹ್ಮದ್, ಅನ್ಸಾರಿ ಇವರಿಗೆ ಯೋಗಿ ಅವಧಿಯಲ್ಲಿ ನರಕ ಸಿಕ್ಕಿದೆ. ಬಾಲ್ಯದಲ್ಲೇ ಸನ್ಯಾಸತ್ವ ಸ್ವೀಕಾರ ಮಾಡಿದ್ದ 26 ವರ್ಷದ ತರುಣ ಸಂತ ಲೋಕಸಭೆಗೆ(Lok Sabha) ಆಯ್ಕೆಯಾಗಿದ್ದ. ಮೀಸೆ ಬರದ ಗಡ್ಡವಿರದ ಹುಡುಗ ರಾಜಕಾರಣದಲ್ಲೇನು ಮಾಡಿಯಾನು ಅನ್ನೋದು ಸುತ್ತಮುತ್ತಲೂ ಇದ್ದವರ ಅಭಿಪ್ರಾಯವಾಗಿತ್ತು. ಆ ಹುಡುಗ ಇಡೀ ಭಾರತವೇ ತಿರುಗಿ ನೋಡುವಂತೆ ರಾಜ್ಯವನ್ನ ಆಳಬಹುದು ಅನ್ನೋ ಅಂದಾಜು ಯಾರಿಗೂ ಇರ್ಲಿಲ್ಲಾ. ಉತ್ತರ ಪ್ರದೇಶವೆನ್ನೋ(Uttar Pradesh) ಅತಿ ದೊಡ್ಡ ಹಾಗೂ ಅಪರಾಧದಲ್ಲೇ ಕುಖ್ಯಾತಿಯಾಗಿದ್ದ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಯೋಗಿ ಮಾಡೆಲ್ ಅನ್ನೋದು ಜನಜನಿತವಾಗೋ ಹಾಗೇ ಮಾಡಿದ್ದಾನೆ ಅದೇ ಸಂತ. ಯೋಗಿ ಸಾಗಿ ಬಂದ ಹಾದಿ ಸುಲಭವಾಗಿತ್ತಾ.? ಖಂಡಿತಾ ಇಲ್ಲ.. ಸದನದಲ್ಲೇ ಅಸಹಾಯಕತೆಯಿಂದ ಕಣ್ಣಿರಿಟ್ಟಿದ್ದರು ಯೋಗಿ ಆದಿತ್ಯನಾಥ್. 2007ರಲ್ಲಿ ಯೋಗಿ ಆದಿತ್ಯನಾಥ್ ಗೋರಕ್ ಪುರದ(Gorakh Pur) ಸಂಸದರಾಗಿದ್ದ ಸಮಯವದು.ಆ ಸಮಯದಲ್ಲಿ ಸಮಾಜವಾದಿ ಪಕ್ಷದ ಅಧಿಕಾರವಿತ್ತು. ಮಾಫಿಯಾಗಳ ಮೇಲೆ ನಿಯಂತ್ರಣ ಸಾಧಿಸೋಕೆ ಸರ್ಕಾರ ಸಂಪೂರ್ಣ ವಿಫಲತೆಯನ್ನ ಕಂಡಿತ್ತು. ಅತೀಕ್ ಅಹ್ಮದ್ , ಮುಕ್ತಾರ್ ಅನ್ಸಾರಿಯಂತಹ ಗೂಂಡಾಗಳು ರಾಜಕಾರಣದಲ್ಲಿ ಇದ್ದರು.

ಇದನ್ನೂ ವೀಕ್ಷಿಸಿ: Watch Video: ಹೇಗಿದೆ ಕೋಲಾರ ಮತದಾರರ ಲೆಕ್ಕಾಚಾರ..? ಅಸೆಂಬ್ಲಿಯಲ್ಲಿನ ಹೊಂದಾಣಿಕೆ ಲೋಕಸಭೆ ಹೊತ್ತಿಗೆ ಮಾಯವಾಗಿದ್ದೇಕೆ?

Video Top Stories