
ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ, ರೆಡ್ಡಿಗಳ ನಡುವಿನ ದ್ವೇಷ ಎಂಥದ್ದು?
ಕೋರ್ಟ್ ಇದೆ ಅಂತ ಆಂಧ್ರಕ್ಕೆ ಹೋದ ಅಪ್ಪ-ಮಗನನ್ನ ಹಂತಕರು ಭೀಕರವಾಗಿ ಕೊಂದು ಮುಗಿಸಿದ್ರು. ಬಿಜೆಪಿಯ ಕಾರ್ಯಕರ್ತರಾಗಿದ್ದ ಇವರನ್ನು ಯಾರು ಕೊಂದಿದ್ದು..?
ಅಪ್ಪ-ಮಗ... ಬೆಜೆಪಿಯ ನಿಷ್ಠಾವಂತ ಕಾರ್ಯಕರ್ತರು.. ಆ ಭಾಗದ ನಾಯಕರೂ ಸಹ.. ಅಪ್ಪ ಫುಲ್ ಟೈಂ ರಿಯಲ್ ಎಸ್ಟೇಟ್ ಉದ್ಯಮಿ.. ಪಾರ್ಟ್ ಟೈಂ ಪೊಲಿಟಿಷಿಯನ್ ಆದ್ರೆ ಮಗ ಜನ ಸೇವೆಗೇ ಅಂತಾನೇ ನಿಂತುಬಿಟ್ಟಿದ್ದ.. ಆವತ್ತೊಂದು ದಿನ ಅಪ್ಪ ಮಗ ಯಾವುದೋ ಕೋರ್ಟ್ ಕೇಸ್ ಇದೆ ಅಂತ ಆಂಧ್ರಕ್ಕೆ ಹೋಗಿದ್ರು.. ಆದರೆ ಕೋರ್ಟ್ಗೆ ಹೋಗುವ ಮೊದಲೇ ಅವರನ್ನ ಯಾರೋ ಕಿಡ್ನ್ಯಾಪ್ ಮಾಡಿಬಿಟ್ಟರು.. ನಂತರ ಕೆಲ ಗಂಟೆಗಳ ನಂತರ ಅವರ ಮೃತದೇಹ 15 ಕಿಲೋ ಮೀಟರ್ ದೂರದಲ್ಲಿ ಸಿಕ್ಕಿತ್ತು.