Asianet Suvarna News Asianet Suvarna News

DK Suresh: ಅಂಕಿ ಅಂಶಗಳೊಂದಿಗೆ ಹಸ್ತಪಡೆ ‘ಸಿದ್ದ’..! ಕಾಂಗ್ರೆಸ್ ಕೈಗೆ ಅಸ್ತ್ರ ನೀಡಿತಾ ಬಿಜೆಪಿ..?

ಏನಾಗಲಿದೆ ಅನುದಾನದ ಯುದ್ಧಕಾಂಡ..?
ಸಂಸದರ ಮೇಲೆ ಮುಗಿ ಬಿದ್ದ ಕೇಸರಿ ಪಡೆ
ಬಿಜೆಪಿ ಅಟ್ಯಾಕಿಗೆ ಕಾಂಗ್ರೆಸ್ ರಣತಂತ್ರ..!

ಮೊನ್ನೆ ಮೋದಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿತು. ಬಜೆಟ್ ನಂತರ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳುವಾಗ ಕಾಂಗ್ರೆಸ್(Congress) ಸಂಸದ ಡಿಕೆ ಸುರೇಶ್ (DK Suresh)ಅವರು ಪ್ರತ್ಯೇಕ ದೇಶದ ವಿಚಾರವನ್ನ ಎತ್ತಿ ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದರು. ಅದೊಂದು ಹೇಳಿಕೆಗೆ ರಾಜಕೀಯವಾಗಿ ಪರ ವಿರೋಧ ಚರ್ಚೆಗಳು ಶುರುವಾಗಿದ್ದವು. ಆದ್ರೆ ಈಗ ಈ ರಣರಂಗ ರಾಷ್ಟ್ರ ರಾಜಧಾನಿಗೆ ಶಿಫ್ಟ್ ಆಗಲಿದೆ. ಲೋಕಸಭೆ(Loksabhe) ಕದನಕ್ಕೆ ದಿನಗಳು ಹತ್ತಿರವಾಗ್ತಾ ಇದಾವೆ. ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳ ಅಬ್ಬರ ಜೋರಾಗ್ತಿದೆ. ಏಟಿಗೆ ಎದಿರೇಟು. ಅಸ್ತ್ರಕ್ಕೆ ಪ್ರತ್ಯಾಸ್ತ್ರ. ಚುನಾವಣೆಗೂ ಮುನ್ನ ಅಖಾಡ ರೆಡಿಯಾಗ್ತಿದೆ. ಕೇಂದ್ರ ಬಜೆಟ್ ಅನುದಾನ ತಾರತಮ್ಯ ಖಂಡಿಸಿ ಪ್ರತ್ಯೇಕ ರಾಷ್ಟ್ರದ ಕಿಡಿ ಎಬ್ಬಿಸಿದ್ದ ಡಿಕೆ ಸುರೇಶ್ ಮಾತು ಕರ್ನಾಟಕದಲ್ಲಿ ರಾಜಕೀಯ ಕೋಲಾಹಲ ಎಬ್ಬಿಸಿದೆ.

ಇದನ್ನೂ ವೀಕ್ಷಿಸಿ:  Arun Puttila: ಇಂದು ಬಹಿರಂಗವಾಗಲಿದ್ಯಾ ಅರುಣ್ ಪುತ್ತಿಲ ಅಂತಿಮ ನಡೆ..? ಬಿಜೆಪಿ ಹೇಳ್ತಿರೋದೇನು..?

Video Top Stories