ಬಡವರ ಬಗ್ಗೆ ಅತ್ಯಂತ ಕಾಳಜಿ: ಸುಧಾಮೂರ್ತಿ ಶ್ಲಾಘಿಸಿದ ಮೋದಿ!

ಭಾರತ ಲಸಿಕಾ ಅಭಿಯಾನದಲ್ಲಿ ವಿಶ್ವದಾಖಲೆ ಬರೆದಿದೆ. ದೇಶದಲ್ಲಿ 100 ಕೋಟಿ ಡೋಸ್‌ ವ್ಯಾಕ್ಸಿನ್ ಪೂರ್ಣಗೊಂಡಿದೆ. ಒಂಭತ್ತು ತಿಂಗಳಲ್ಲಿ ಈ ಮೈಲಿಗಲ್ಲು ಸಾಧಿಸಿದೆ. ಹೀಗಿರುವಾಗ ದೇಶಾದ್ಯಂತ ನೂರು ಕೋಟಿ ಡೋಸ್ ಲಸಿಕೆ ನಿಡಿರುವ ಸಂಭ್ರಮ ಮನೆ ಮಾಡಿದೆ. ಈ ಮೂಲಕ ಇಡೀ ವಿಶ್ವವನ್ನು ಕಂಗೆಡಿಸಿದ ಕೊರೋನಾ ಮಹಾಮಾರಿ ಎಂಬ ಯುದ್ಧ ಗೆಲ್ಲುವ ಹಾದಿಯಲ್ಲಿ ಭಾರತ ಸಾಗುತ್ತಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಅ.21) ಭಾರತ ಲಸಿಕಾ ಅಭಿಯಾನದಲ್ಲಿ ವಿಶ್ವದಾಖಲೆ ಬರೆದಿದೆ. ದೇಶದಲ್ಲಿ 100 ಕೋಟಿ ಡೋಸ್‌ ವ್ಯಾಕ್ಸಿನ್ ಪೂರ್ಣಗೊಂಡಿದೆ. ಒಂಭತ್ತು ತಿಂಗಳಲ್ಲಿ ಈ ಮೈಲಿಗಲ್ಲು ಸಾಧಿಸಿದೆ. ಹೀಗಿರುವಾಗ ದೇಶಾದ್ಯಂತ ನೂರು ಕೋಟಿ ಡೋಸ್ ಲಸಿಕೆ ನಿಡಿರುವ ಸಂಭ್ರಮ ಮನೆ ಮಾಡಿದೆ. ಈ ಮೂಲಕ ಇಡೀ ವಿಶ್ವವನ್ನು ಕಂಗೆಡಿಸಿದ ಕೊರೋನಾ ಮಹಾಮಾರಿ ಎಂಬ ಯುದ್ಧ ಗೆಲ್ಲುವ ಹಾದಿಯಲ್ಲಿ ಭಾರತ ಸಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಇನ್ಫೋಸಿಸ್‌ನ ಸುಧಾಮೂರ್ತಿಯವರನ್ನು ಶ್ಲಾಘಿಸಿದ್ದಾರೆ. ಸರ್ಕಾರ ಹಾಗೂ ಕಾರ್ಪೋರೇಟ್ ಶಕ್ತಿ ಜೊತೆಗೂಡಿ ಆಸ್ಪತ್ರೆ ನಿರ್ಮಾಣ ಮಾಡಿವೆ. ಇನ್ಫೋಸಿಸ್ ಸಂಸ್ಥೆ ವಿಶ್ರಾಮ್ ಸದನ್ ಆಸ್ಪತ್ರೆ ನಿರ್ಮಿಸಿದೆ. ಇಲ್ಲಿ ವಿದ್ಯುತ್, ಜಮೀನು, ನೀರು ಹೀಗೆ ಪ್ರತಿಯೊಂದು ಸೌಲಭ್ಯವನ್ನೂ ನೀಡಿದೆ ಎಂದು ಏಮ್ಸ್ ವೈದ್ಯರು ಮತ್ತು ಸುಧಾಮೂರ್ತಿ ತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ. 

ಈ ವೇಳೆ ಬಡವರ ಬಗ್ಗೆ ಸುಧಾಮೂರ್ತಿಗಿರುವ ಕಾಳಜಿಯನ್ನು ಕೊಂಡಾಡಿದ್ದಾರೆ

Related Video