Asianet Suvarna News Asianet Suvarna News

India@75: ಏಷ್ಯಾನೆಟ್ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ ಕಾರ್ಗಿಲ್‌ನಲ್ಲಿ ಮುಕ್ತಾಯ

ಏಷ್ಯಾನೆಟ್ ಸುವರ್ಣ ನ್ಯೂಸ್ ನೆಟವರ್ಕ್ ಹಮ್ಮಿಕೊಂಡಿದ್ದ ಇಂಡಿಯಾ@75 ಅಮೃತ ಮಹೋತ್ಸವ ಯಾತ್ರೆ ಮುಕ್ತಾಯಗೊಂಡಿದೆ. 
 

ಬೆಂಗಳೂರು(ಆ.17):  ಏಷ್ಯಾನೆಟ್ ಸುವರ್ಣ ನ್ಯೂಸ್ ನೆಟವರ್ಕ್ ಹಮ್ಮಿಕೊಂಡಿದ್ದ ಇಂಡಿಯಾ@75 ಅಮೃತ ಮಹೋತ್ಸವ ಯಾತ್ರೆ ಮುಕ್ತಾಯಗೊಂಡಿದೆ. ಕಾರ್ಗಿಲ್ ಜಿಲ್ಲೆಯ ಡ್ರಾಂಗ್ ಡ್ರುಂಗ್‌ನಲ್ಲಿ ಸೋಮವಾರ ತ್ರಿವರ್ಣ ಧ್ವಜಾರೋಹಣದೊಂದಿಗೆ ಅಂತಿಮವಾಗಿದೆ. ಇದರೊಂದಿಗೆ 9 ದಿನಗಳ ಹಿಂದೆ ಬೆಂಗಳೂರಿನಲ್ಲಿ ಆರಂಭವಾಗಿದ್ದ ಯಾತ್ರೆ ಸಮಾಪನಗೊಂಡಿದೆ. ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಇಂಡಿಯಾ@75 ಯಾತ್ರೆಯು ಕೇರಳ, ಕರ್ನಾಟಕ ಚರಣ ಪೂರೈಸಿ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ, ಚಂಡೀಗಢ, ಹಿಮಾಚಲ ಪ್ರದೇಶದ ಮಾರ್ಗವಾಗಿ ಲಡಾಖ್ ತಲುಪಿ ರವಿಶಂಕರ್ ಭಟ್ ನೇತೃತ್ವದಲ್ಲಿ ಮುಕ್ತಾಯಗೊಂಡಿದೆ. 

Har Ghar Tiranga : 20 ದಿನದಲ್ಲಿ 500 ಕೋಟಿ ರೂ. ಧ್ವಜ ಮಾರಾಟ!

Video Top Stories