ಬೆಟ್ಟಕ್ಕೆ ಕರೆದೊಯ್ದು ಏನೇನು ಮಾಡಿದಳು, A To Z ಕತೆ ಬಿಚ್ಚಿಟ್ಟು ಬದುಕು ಅಂತ್ಯಗೊಳಿಸಿದ ಯುವಕ

ನನ್ನ ಹೃದಯಕ್ಕೆ ಕಾಲು ಇಟ್ಟಳು, ನೀನೆ ಬೇಕು ಎಂದು ಹಠ ಹಿಡಿದಳು, ಜೀವನ ಬರ್ಬಾದ್ ಮಾಡಿ ನನಗೆ ನರಕ ಕೊಟ್ಟಳು.  ಹುಡುಗಿಯರು ಏನೇ ಮಾಡಿದರೂ ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಆದರೆ ಎಲ್ಲಾ ಕೇಸ್ ನನ್ನ ಮೇಲೆ, ಪುರುಷರು ಕೆಟ್ಟವರು, ಸಾಕಾಯ್ತು ಬದುಕು ಎಂದು ಯುವಕ ಬದುಕು ಅಂತ್ಯಗೊಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. 

Chethan Kumar  | Updated: Jan 12, 2025, 1:05 PM IST

ಹಾಸನ(ಜ.12) ಹಾಸನದ ಈ ಘಟನೆ ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. 2021ರಲ್ಲಿ ಕವನ್ ಹಾಗೂ ಅಂಜಲಿ ನಡುವೆ ಪ್ರೀತಿ ಶುರುವಾಗಿದೆ. ಮಾಡರ್ನ್ ಪ್ರೀತಿ ಕಾರಣ ಇವರಿಬ್ರ ನಡುವೆ ಸೀಕ್ರೆಟ್ ಏನು ಉಳಿದಿರಲಿಲ್ಲ, A To Z ಮುಗಿದಿತ್ತು. ಆದರೆ ಆಕೆಯಿಂದ ದೂರ ನಡೆದ ಕವನ್ ಹಾಗೂ ಅಂಜಲಿ ನಡುವೆ ಜಗಳ, ಗುದ್ದಾಟ, ಪೊಲೀಸ್ ಕೇಸ್ ಒಂದರ ಮೇಲೊಂದರಂತೆ ಬಿದ್ದಿತ್ತು. ಆದರೆ ಪೊಲೀಸರು ಅಂಜಲಿ ಪರ ನಿಂತಿದ್ದರು. ಕಾರಣ ನಾನು ಗಂಡು, ಅವಳು ಹೆಣ್ಣು ಅನ್ನೋದು ಕವನ್ ಆರೋಪ.ಇತೀಚೆಗೆ ಚಾಮುಂಡಿ ಬೆಟ್ಟಕ್ಕೆ ಕೆರದೊಯ್ದು ಕುಡಿಸಿ ಬಿಟ್ಟಿದ್ದಾಳೆ. ಇಲ್ಲಿಂದ ಎಲ್ಲಾ ಉಲ್ಟಾ ಆಗಿದೆ. ನನ್ನ ಈ ಸ್ಥಿತಿಗೆ ಅಂಜಲಿ ಕಾರಣ ಎಂದು 30ರ ಹರೆಯದ ಕವನ್ ಬದುಕು ಅಂತ್ಯಗೊಳಿಸಿದ್ದಾನೆ.