Vaikuntha Ekadashi: ಮನೆಯಲ್ಲಿಯೇ ಕುಳಿತು ಶ್ರೀಮನ್ನಾರಾಯಣ ದೇವರ ದರ್ಶನ ಪಡೆಯಿರಿ

ಇಂದು ವೈಕುಂಠ ಏಕಾದಶಿಯಾಗಿದ್ದು ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಬಂದು ಭಕ್ತರಿಗೆ ದರ್ಶನ ಭಾಗ್ಯ ಕೊಡುವ ಪರಮ ಪುಣ್ಯ ದಿನ. ಶ್ರೀಹರಿಯನ್ನು ಪೂಜಿಸುವುದರಿಂದ ಮನುಜರ ಪಾಪಗಳು ಕಳೆಯುವ ದಿನ. ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ. ವೈಕುಂಠ ಏಕಾದಶಿಗಾಗಿ ಇಡೀ ದೇಶವೇ ಕಾತುರತೆಯಿಂದ ಕಾಯುತ್ತಿರುತ್ತದೆ. ಮುಖ್ಯವಾಗಿ ಹೊಸವರ್ಷದ ಆರಂಭದಲ್ಲಿ ಮನೆ ಮಾಡಿರುವಂತಹ ಏಕಾದಶಿ ಹಬ್ಬದಂದು ದೇವರ ದರ್ಶನವನ್ನು ವೀಕ್ಷಕರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. 
 

Share this Video
  • FB
  • Linkdin
  • Whatsapp

ಇಂದು ವೈಕುಂಠ ಏಕಾದಶಿಯಾಗಿದ್ದು (Vaikunta Ekadashi) ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಬಂದು ಭಕ್ತರಿಗೆ ದರ್ಶನ ಭಾಗ್ಯ ಕೊಡುವ ಪರಮ ಪುಣ್ಯ ದಿನ. ಶ್ರೀಹರಿಯನ್ನು ಪೂಜಿಸುವುದರಿಂದ ಮನುಜರ ಪಾಪಗಳು ಕಳೆಯುವ ದಿನ. ಈ ದಿನ ವೈಕುಂಠದ (Vaikunta) ಬಾಗಿಲು ತೆರೆದಿರುತ್ತದೆ. ವೈಕುಂಠ ಏಕಾದಶಿಗಾಗಿ ಇಡೀ ದೇಶವೇ ಕಾತುರತೆಯಿಂದ ಕಾಯುತ್ತಿರುತ್ತದೆ. ಮುಖ್ಯವಾಗಿ ಹೊಸವರ್ಷದ (New Year) ಆರಂಭದಲ್ಲಿ ಮನೆ ಮಾಡಿರುವಂತಹ ಏಕಾದಶಿ ಹಬ್ಬದಂದು ದೇವರ ದರ್ಶನವನ್ನು ವೀಕ್ಷಕರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ವೈಕುಂಠ ಏಕಾದಶಿ: ಈ ದಿವಸ ಮಾಡಲೇಬೇಕಾದ ಆಚರಣೆಗಳು ಯಾವುವು?

ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವಿಷ್ಣು ದೇಗುಲಗಳಲ್ಲಿ (Temples) ಯಾವ ರೀತಿಯಾದಂತಹ ಸಂಭ್ರಮದ ಆಚರಣೆ ಹಾಗೂ ದೇವರಿಗೆ ಮಾಡಿರುವಂತಹ ಅಲಂಕಾರವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ವಿಶೇಷವಾಗಿ ವೈಕುಂಠ ಏಕಾದಶಿ ಆಚರಣೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂಬುದನ್ನು ಶ್ರೀಕಂಠ ಶಾಸ್ರ್ತಿಗಳು ಈ ವಿಡಿಯೋದಲ್ಲಿ ವಿವರಿಸಿಕೊಟ್ಟಿದ್ದಾರೆ.

Related Video