ಕೊಕ್ಕರೆ ರೂಪದ ರಾಕ್ಷಸನ ಸೊಕ್ಕು ಮುರಿದ ಬಾಲಕೃಷ್ಣನ ಲೀಲೆಯಿದು..!
ಒಂದು ದಿನ ಗೋಪಾಲಕರು ಗೋವುಗಳಿಗೆ ನೀರು ಕುಡಿಸಲು ಕೆರೆ ಹತ್ತಿರ ಬರುತ್ತಾರೆ. ಗೋವುಗಳಿಗೆ ನೀರು ಕುಡಿಸಿ, ತಾವೂ ನೀರು ಕುಡಿದು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅಲ್ಲಿಗೆ ಬಕ ಎನ್ನುವ ರಾಕ್ಷಸ ಪರ್ವತದಷ್ಟು ದೊಡ್ಡ ಕೊಕ್ಕು ಧರಿಸಿ ಅಲ್ಲಿಗೆ ಬರುತ್ತಾನೆ.
ಒಂದು ದಿನ ಗೋಪಾಲಕರು ಗೋವುಗಳಿಗೆ ನೀರು ಕುಡಿಸಲು ಕೆರೆ ಹತ್ತಿರ ಬರುತ್ತಾರೆ. ಗೋವುಗಳಿಗೆ ನೀರು ಕುಡಿಸಿ, ತಾವೂ ನೀರು ಕುಡಿದು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅಲ್ಲಿಗೆ ಬಕ ಎನ್ನುವ ರಾಕ್ಷಸ ಪರ್ವತದಷ್ಟು ದೊಡ್ಡ ಕೊಕ್ಕು ಧರಿಸಿ ಅಲ್ಲಿಗೆ ಬರುತ್ತಾನೆ. ಆ ಕೊಕ್ಕರೆ ರೂಪದ ರಾಕ್ಷಸ ಕೃಷ್ಣನನ್ನು ತಿನ್ನಲು ಬರುತ್ತಾನೆ. ಕೃಷ್ಣ ಕೊಕ್ಕರೆ ಕೊಕ್ಕನ್ನು ಸೀಳುತ್ತಾನೆ. ಗೋಪಾಲಕರು ಚಪ್ಪಾಳೆ ತಟ್ಟಿ ಖುಷಿಪಡುತ್ತಾರೆ. ದೇವತೆಗಳು ಪುಪ್ಷವೃಷ್ಟಿ ಸುರಿಸಿ ಸಂತೋಷಪಡುತ್ತಾರೆ. ಎಲ್ಲರೂ ಕೃಷ್ಣನನ್ನು ಪ್ರೀತಿಯಿಂದ ನೋಡುತ್ತಾರೆ.
ಗೋಪಾಲಕರನ್ನು ಸಾಯಿಸಲು ಗೋವತ್ಸ ರೂಪ ತಾಳಿದ ರಾಕ್ಷಸನನ್ನು ಕೃಷ್ಣ ವಧಿಸಿದ್ದು ಹೀಗೆ..!