Asianet Suvarna News Asianet Suvarna News

ಅಭಿಮಾನಿ ದೇವರುಗಳನ್ನು ಬಿಟ್ಟು ಹೊರಟ 'ಯುವರತ್ನ'; ಮುಗಿಲು ಮುಟ್ಟಿದ ಆಕ್ರಂದನ

ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಅಭಿಮಾನಿಗಳು ಕಂಠೀರವ ಸ್ಟೇಡಿಯಂನತ್ತ ಹರಿದು ಬಂದಿದ್ದಾರೆ. ಪಾರ್ಥೀವ ಶರೀರವನ್ನು ಸ್ಟೇಡಿಯಂಗೆ ತರುತ್ತಲೇ ಅಭಿಮಾನಿಗಳ ದುಃಖದ ಕಟ್ಟೆ ಒಡೆದಿದೆ. 'ಅಪ್ಪೂ, ಪುನೀತ್ ಅಣ್ಣ, ಮತ್ತೆ ಹುಟ್ಟಿ ಬನ್ನಿ' ಎಂದು ಘೋಷಣೆ ಕೂಗಿದರು. 
 

First Published Oct 30, 2021, 9:56 AM IST | Last Updated Oct 30, 2021, 11:08 AM IST

ಬೆಂಗಳೂರು (ಅ. 30): ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಅಭಿಮಾನಿಗಳು ಕಂಠೀರವ ಸ್ಟೇಡಿಯಂನತ್ತ ಹರಿದು ಬಂದಿದ್ದಾರೆ. ಪಾರ್ಥೀವ ಶರೀರವನ್ನು ಸ್ಟೇಡಿಯಂಗೆ ತರುತ್ತಲೇ ಅಭಿಮಾನಿಗಳ ದುಃಖದ ಕಟ್ಟೆ ಒಡೆದಿದೆ. 'ಅಪ್ಪೂ, ಪುನೀತ್ ಅಣ್ಣ, ಮತ್ತೆ ಹುಟ್ಟಿ ಬನ್ನಿ' ಎಂದು ಘೋಷಣೆ ಕೂಗಿದರು.

 ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡ ರಾಘವೇಂದ್ರ ರಾಜ್‌ಕುಮಾರ್

ಶುಕ್ರವಾರ ಮಧ್ಯಾಹ್ನ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿಕ್ರಂ ಆಸ್ಪತ್ರೆ, ಸದಾಶಿವ ನಗರ ನಿವಾಸದತ್ತ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಆಕ್ರಂದನ ಮುಗಿಲು ಮುಟ್ಟಿತ್ತು. ಅಭಿಮಾನಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.