
ವಠಾರ ಶಾಲೆಯ 4 ಮಕ್ಕಳಿಗೆ ಸೋಂಕು; ಶಾಲೆ ಪ್ರಾರಂಭಿಸುವ ಮುನ್ನ ಈ ವರದಿ ನೋಡಲೇಬೇಕು
ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಶಾಲೆ ಪ್ರಾರಂಭ ಮಾಡಬೇಕೆ? ಬೇಡವೇ ಎಂಬ ಚರ್ಚೆ ಶುರುವಾದ ಸಂದರ್ಭದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.
ಬೆಂಗಳೂರು (ಅ. 09): ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಶಾಲೆ ಪ್ರಾರಂಭ ಮಾಡಬೇಕೆ? ಬೇಡವೇ ಎಂಬ ಚರ್ಚೆ ಶುರುವಾದ ಸಂದರ್ಭದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಠಾರ ಶಾಲೆ ಮಕ್ಕಳಿಗೂ ಅಂಟಿದ ಕೊರೊನಾ ಸೋಂಕು..!
ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಶುರುವಾಗಿದೆ. ಈ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಕೋವಿಡ್ ಸೋಂಕು ತಗುಲಿದ್ದು, ಆ ಶಿಕ್ಷಕರಿಂದ 4 ಮಕ್ಕಳಿಗೂ ಸೋಂಕು ತಗುಲಿರುವ ಘಟನೆ ಕಲಬುರಗಿ ಜಿಲ್ಲೆ ಅಫ್ಜಲ್ಪುರ ತಾಲೂಕಿನ ಮಾಶಾಳದಲ್ಲಿ ವರದಿಯಾಗಿದೆ. ಶಾಲೆಯ 207 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಾಗಿದೆ.