Asianet Suvarna News Asianet Suvarna News

Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Jul 17, 2024, 8:45 AM IST | Last Updated Jul 17, 2024, 8:45 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಬುಧವಾರ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ.

ಬುಧವಾರ ಅನೂರಾಧ ನಕ್ಷತ್ರ ಇರುವುದರಿಂದ ಇದು ಅಮೃತಸಿದ್ಧಿ ಯೋಗವಾಗಿದೆ. ಈ ದಿನ ಮಹಾವಿಷ್ಣುವಿನ ಪ್ರಾರ್ಥನೆಗೆ ತುಂಬಾ ಸಕಾಲವಾಗಿದೆ. ಇಲ್ಲಿಂದ ವ್ರತಗಳು ಆರಂಭವಾಗುತ್ತವೆ. ಪದ್ಮ ಪುರಾಣದ ಪ್ರಕಾರ, ಇಂದು ವಿಷ್ಣು ಯೋಗ ನಿದ್ರೆಗೆ ಜಾರುತ್ತಾನೆ. ಮಿಥುನ ರಾಶಿಯವರಿಗೆ ಬಂಧುಗಳಲ್ಲಿ ಮನಸ್ತಾಪ ಬರಲಿದೆ. ಪ್ರಯಾಣದಲ್ಲಿ ತೊಂದರೆ. ಹಣಕಾಸಿನ ತೊಡಕು. ವೃತ್ತಿಯಲ್ಲಿ ಪರಿಶ್ರಮ. ವಿಷ್ಣು ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ:  ಯತೀಂದ್ರ ಸಿದ್ದರಾಮಯ್ಯ ಕುರ್ಚಿ ಆಕ್ರಮಿಸಿದ ಡಿಕೆ ಶಿವಕುಮಾರ್!