
Today Horoscope: ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಶನಿವಾರ, ದಶಮಿ ತಿಥಿ, ಸ್ವಾತಿ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶನಿವಾರ ಆಗಿರುವುದರಿಂದ ಶನಿದೇವನಿಗೆ ವಿಶಿಷ್ಟವಾದ ಬಲವಿದೆ. ಇಂದು ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಡಕು. ಸ್ನೇಹಿತರ ಜೊತೆ ಕಲಹ. ಕುಟುಂಬದಲ್ಲಿ ಸಹಕಾರ. ಹಣಕಾಸಿನ ಸಹಾಯ. ಗ್ರಾಮ ದೇವತಾದರ್ಶನ ಮಾಡಿ. ವೃಶ್ಚಿಕ ರಾಶಿಯವರಿಗೆ ವ್ಯಯದ ದಿನ. ಸ್ತ್ರೀಯರಿಗೆ ಆಪ್ತರು ದೂರಾಗುತ್ತಾರೆ. ವಿದ್ಯಾರ್ಥಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಆಂಜನೇಯ ಪ್ರಾರ್ಥನೆ ಮಾಡಿ. ಧನಸ್ಸು ರಾಶಿಯವರಿಗೆ ಕೆಲಸದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದ್ದು, ಪರಿಶ್ರಮದ ದಿನವಾಗಿದೆ. ಆಹಾರದಲ್ಲಿ ವ್ಯತ್ಯಾಸ. ಶಾಂತವಾಗಿರಿ. ವಿಷ್ಣು ಸಹಸ್ರನಾಮ ಪಠಿಸಿ.
ಇದನ್ನೂ ವೀಕ್ಷಿಸಿ: ರಾಮ ಮಂದಿರ ದುಡ್ಡಲ್ಲಿ ಎಷ್ಟು ಮಕ್ಕಳಿಗೆ ಶಿಕ್ಷಣ ಸಿಗುತಿತ್ತು? ಪ್ರಶ್ನಿಸಿ ಟ್ರೋಲ್ ಆದ ತೇಜಸ್ವಿ ಯಾದವ್!