Asianet Suvarna News Asianet Suvarna News

Today Horoscope: ಈ ದಿನ ಶುಭಕಾರ್ಯಗಳಿಗೆ ಉತ್ತಮವಾಗಿದ್ದು, ಮುತ್ತೈದೆಯರನ್ನ ಮನೆಗೆ ಕರೆದು ಮಂಗಲ ದ್ರವ್ಯಗಳ ದಾನ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತೃತೀಯ ತಿಥಿ, ಹಸ್ತ ನಕ್ಷತ್ರ.

ಮಂಗಳವಾರ ತೃತೀಯ ತಿಥಿ ಬಂದಿರುವುದರಿಂದ ತುಂಬಾ ಪ್ರಶಸ್ತವಾದ ದಿನವಾಗಿದೆ. ಇಂದು ಗೌರಿಯ ಆರಾಧನೆ ಮಾಡಿ, ಮುತ್ತೈದೆಯರನ್ನ ಕರೆದು ಅವರಿಗೆ ಮಂಗಲ ದ್ರವ್ಯವನ್ನು ಕೊಡಿ. ತುಲಾ ರಾಶಿಯವರಿಗೆ ಕೆಲಸದಲ್ಲಿ ಒತ್ತಡ. ಕಾಲಿನ ಭಾಗದಲ್ಲಿ ತೊಂದರೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಪೂಜಾಕಾರ್ಯಗಳಲ್ಲಿ ಅಡ್ಡಿ. ದುರ್ಗಾ ಕವಚ ಪಠಿಸಿ. ವೃಶ್ಚಿಕ ರಾಶಿಯವರಿಗೆ ಲಾಭದಾಯಕ ದಿನವಾಗಿದೆ. ಹಾಲು-ಹೈನುಗಾರರಿಗೆ ಲಾಭ. ವಸ್ತು ನಷ್ಟತೆ. ಕೆಲಸದಲ್ಲಿ ಅನುಕೂಲ. ಬಂಧುಗಳ ಸಹಕಾರ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ಇದನ್ನೂ ವೀಕ್ಷಿಸಿ:  30 ವರ್ಷದ ಬಳಿಕ ಕುಂಭ ರಾಶಿಯಲ್ಲಿ ಶನಿ 2 ತಿಂಗಳು ಹುಷಾರ್..!

Video Top Stories