
Today Horoscope: ಈ ರಾಶಿಯವರಿಗೆ ಇಂದು ವ್ಯಯದ ದಿನವಾಗಿದ್ದು, ಪರಿಹಾರಕ್ಕೆ ಹೀಗೆ ಮಾಡಿ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಗುರುವಾರ, ತ್ರಯೋದಶಿ ತಿಥಿ, ಪುಷ್ಯ ನಕ್ಷತ್ರ.
Add Asianetnews Kannada as a Preferred Source

ಗುರುವಾರ ತ್ರಯೋದಶಿ, ಪುಷ್ಯ ಯೋಗ ಇದ್ದು, ಅಮೃತ ಸಿದ್ಧಿ ಯೋಗವಿದೆ. ಈ ದಿನ ಶುಭ ಕಾರ್ಯಗಳಿಗೆ ತುಂಬಾ ಉತ್ತಮವಾಗಿದೆ. ವೃಷಭ ರಾಶಿಯವರಿಗೆ ಈ ದಿನ ಸಹೋದರರ ಸಹಕಾರ ಇರಲಿದೆ. ವ್ಯಯದ ದಿನ. ವೃತ್ತಿಯಲ್ಲಿ ಕಿರಿಕಿರಿ. ಕೆಲಸದಲ್ಲಿ ಅನುಕೂಲ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
ಮಿಥುನ ರಾಶಿಯವರಿಗೆ ಆಹಾರ ಸಮೃದ್ಧಿ. ಕುಟುಂಬ ಸೌಖ್ಯ. ಮಾತಿನ ಬಲ. ಬರವಣಗೆಯ ಬಲ. ಸ್ತ್ರೀಯರಿಗೆ ಲಾಭ. ಸಿಹಿ ಪದಾರ್ಥದ ವ್ಯಾಪಾರಿಗಳಿಗೆ ಲಾಭ. ವೃತ್ತಿಯಲ್ಲಿ ಅನುಕೂಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಇದನ್ನೂ ವೀಕ್ಷಿಸಿ: Yash: ಛತ್ರಪತಿ ಶಿವಾಜಿ ಆಗ್ತಾರಾ ಯಶ್..? ರಾಕಿಂಗ್ ಸ್ಟಾರ್ ರಾಮಾಯಣ ಯಾವಾಗ ಶುರು..?