
Today Horoscope: ಇಂದು ಈ ರಾಶಿಯವರಿಗೆ ಹೆಚ್ಚಿನ ವ್ಯಯವಾಗಲಿದ್ದು, ವಿದ್ಯಾರ್ಥಿಗಳಿಗೂ ತೊಡಕಿದೆ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ,ಶುಕ್ರವಾರ,ಏಕಾದಶಿ ತಿಥಿ,ಹಸ್ತ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶುಕ್ರವಾರ ಹಸ್ತ ನಕ್ಷತ್ರ ಬಂದಿದ್ದು, ಜೊತೆಗೆ ಏಕಾದಶಿ ಇದೆ. ಹಾಗಾಗಿ ವಿಷ್ಣುವಿನ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರಿಗೆ ಹಣಕಾಸಿನ ವ್ಯತ್ಯಾಸವಾಗಲಿದೆ. ಪ್ರಯಾಣದಲ್ಲಿ ತೊಂದರೆ. ಬಂಧುಗಳ ವಿರೋಧ. ವೃತ್ತಿಯಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ.ಕರ್ಕಟಕ ರಾಶಿಯವರಿಗೆ ಭಯದ ವಾತಾವರಣ. ಬಂಧುಗಳಲ್ಲಿ ಶತ್ರುತ್ವ. ಸಾಲ ಬಾಧೆ. ವೃತ್ತಿಯಲ್ಲಿ ಲಾಭ. ಆರೋಗ್ಯದಲ್ಲಿ ಎಚ್ಚರವಹಿಸಿ. ದುರ್ಗಾ ಕವಚವನ್ನು ಪಠಿಸಿ.
ಇದನ್ನೂ ವೀಕ್ಷಿಸಿ: News Hour: ಸದನದಲ್ಲಿ ನಡೆಯುತ್ತಾ ವೀರ್ ಸಾವರ್ಕರ್ ಫೋಟೋ ಫೈಟ್?