Asianet Suvarna News Asianet Suvarna News

ತರೀಕೆರೆ; ಕಣ್ಣೇದುರಿಗೆ ಗೆಳೆಯ ಮುಳುಗುತ್ತಿದ್ದರೂ ಏನೂ ಮಾಡಲಾಗಲಿಲ್ಲ, ವಿಡಿಯೋ

ಸ್ನೇಹಿತರ ಕಣ್ಣೇದುರೆ ಕೊಚ್ಚಿಹೋದ/ ಸ್ನೇಹಿತನ ರಕ್ಷಣೆ ಮಾಡಲು ಸಾಧ್ಯವಾಗಲೇ ಇಲ್ಲ/ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗೇಟ್ ಬಳಿ  ನಡೆದ ಪ್ರಕರಣ

ಚಿಕ್ಕಮಗಳೂರು(ನ.  22) ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದ ಯುವಕ ನಾಲೆಯಲ್ಲಿ ಸ್ನೇಹಿತರ ಮುಂದೆಯೇ  ಕೊಚ್ಚಿ ಹೋಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗೇಟ್ ಬಳಿ  ನಡೆದ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದೆ.

ಬೀಗ ಹಾಕಿದ್ದ ಮನೆಯೊಳಗೆ ಗಂಡು- ಹೆಣ್ಣು, ವಿಚಿತ್ರ ಕೇಸ್

22 ವರ್ಷದ ವಿಶ್ವಾಸ್ ನಾಲ್ವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿಶ್ವಾಸ್ ನೀರಿನಲ್ಲಿ ಮುಳುಗುವ ವೇಳೆ ಜೊತೆಗಿದ್ದ ಸ್ನೇಹಿತರು ಆತನನ್ನು ಬದುಕಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ.