Asianet Suvarna News Asianet Suvarna News

ಚಿಕ್ಕಬಳ್ಳಾಪುರ ಬಳಿ ಅಪಘಾತ; ಜಗ್ಗೇಶ್ ಪುತ್ರ ಯತಿರಾಜ್‌ ಕಾರು ನಜ್ಜುಗುಜ್ಜು

* ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಕಾರು ಅಪಘಾತ ಪ್ರಕರಣ
* ಡಿವೈಡರ್ ಬಳಿ ಬೈಕ್ ಸವಾರ ಅಡ್ಡ ಬಂದಿದ್ದರಿಂದ ನಡೆದ ಅಪಘಾತ
*  ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ನುಜ್ಜುಗುಜ್ಜಾಗಿದೆ
* ಅಗಲಗುರ್ಕಿ ಬೈಪಾಸ್ ಬಳಿ ನಡೆದ ಅಪಘಾತ

ಚಿಕ್ಕಬಳ್ಳಾಪುರ(ಜು. 01) ನವರಸ ನಾಯಕ ಜಗ್ಗೇಶ್ ಪುತ್ರನ ಕಾರು ಅಪಘಾತಕ್ಕೆ ಗುರಿಯಾಗಿದೆ. ನಿಯಂತ್ರಣ ತಪ್ಪಿದ ಐಷಾರಾಮಿ ಕಾರು ಮರಕ್ಕೆ ಗುದ್ದಿದೆ. ಅದೃಷ್ಟವಷಾತ್ ಯತಿರಾಜ್ ಅವರಿಗೆ ಗಂಭೀರ ಗಾಯಗಳಾಗಿಲ್ಲ. 

ಹಣವೂ ಇಲ್ಲ, ಸಿಕ್ಸ್ ಪ್ಯಾಕೂ ಇಲ್ಲ.. ಬೆಂಗಳೂರು ಯುವಕನಿಗೆ ಭಾರೀ ಮೋಸ

ಗುರುವಾರ ಮಧ್ಯಾಹ್ನ  12  ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಅಗಲಗುರ್ಕಿ ಬೈಪಾಸ್ ಬಳಿ ಅಪಘಾತ ಸಂಭವಿಸಿದೆ.