
ನೆರವಿಗೆ ಬಂದ ನಟ, ನಿರ್ಮಾಪಕ.. ಪ್ರೊಡ್ಯೂಸರ್ ಪುತ್ರನ ಪುಂಡಾಟ ಕೇಸ್ಗೆ ಟ್ವಿಸ್ಟ್!
* ಬೆಂಗಳೂರಿನಲ್ಲಿ ನಿರ್ಮಾಪಕನ ಪುತ್ರ ಪುಂಡಾಟ ಪ್ರಕರಣ
* ದೂರು ಹಿಂಪಡೆಯಲು ಮುಂದಾದ್ರಾ ಮನೆ ಮಾಲಕಿ?
* ರಾತ್ರೋ ರಾತ್ರಿ ರಾಜಿ ಸಂಧಾನ ಮಾಡಲಾಯ್ತಾ?
* ಪೊಲೀಸರಿಗೆ ದೊಡ್ಡ ತಲೆನೋವಾದ ಪ್ರಕರಣ
ಬೆಂಗಳೂರು(ಅ. 28) ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಪುತ್ರ ಸ್ನೇಹಿತ್ ಪಕ್ಕದ ಮನೆ ಕೆಲಸಗಾರರ ಮೇಲೆ ಹಲ್ಲೆ(attack) ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಿರ್ಮಾಪಕ ಮತ್ತು ನಟನೊಬ್ಬ ಸೌಂದರ್ಯ ಜಗದೀಶ್ ಪುತ್ರನ ಪರವಾಗಿ ನಿಂತಿದ್ದು ದೂರು (Bengaluru Police)ನೀಡಿದ್ದ ಅನುರಾಧಾ ದೂರು ಹಿಂಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
Add Asianetnews Kannada as a Preferred Source

ಸಿಸಿ ಟಿವಿಯಲ್ಲಿ ದಾಖಲಾಗಿದ್ದ ನಿರ್ಮಾಪಕನ ಪುತ್ರ ಪುಂಡಾಟ
ರಾತ್ರೋ ರಾತ್ರಿ ಸಂಧಾನ ಮಾಡಲಾಯಿತಾ? ಅಷ್ಟಕ್ಕೂ ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಎಂಬ ಡಿಟೇಲ್ಸ್ ಇಲ್ಲದೆ. ರಾತ್ರೋ ರಾತ್ರಿ ಪೊಲೀಸ್ ಠಾಣೆಗೆ ತೆರಳಿದ ಮನೆ ಮಾಲಕಿ ದೂರು ಹಿಂಪಡೆಯಲು ಮುಂದಾಗಿದ್ದು ಎಫ್ ಐಆರ್ (FIR) ನಿಂದ ಸ್ನೇಹಿತ್ ಹೆಸರನ್ನು ಕೈಬಿಡಲು ಕೇಳಿಕೊಳ್ಳಲಾಗಿದೆ.