
ಕ್ಷಮೆ ಇರಲಿ ಅಮ್ಮಂದಿರೆ... ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!
ಸುವರ್ಣ ನ್ಯೂಸ್ ಕಚೇರಿಗೆ ಬಂತೊಂದು ಪತ್ರ/ ಬೆಳಗ್ಗೆ 11.30 ರವರೆಗೆ ಈ ಸುದ್ದಿ ಪ್ರಸಾರ ಮಾಡಲಾಗುತ್ತದೆ ಎಂಬ ಕಲ್ಪನೆ ವಾಹಿನಿಗೆ ಇರಲಿಲ್ಲ/ ಈ ಸುದ್ದಿ ಗೋಲ್ಡನ್ ಎಕ್ಸ್ಕ್ಲೂಸೀವ್
ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ನಿರೂಪಕ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ?
ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ ಅದನ್ನು ಸುವರ್ಣ ನ್ಯೂಸ್ ಮೂಲಕ ಹಿಂದಕ್ಕೆ ನೀಡಿದ ಕತೆ.. ಕ್ಷಮಿಸಿಬಿಡಿ ಅಮ್ಮಂದಿರಾ!