Asianet Suvarna News Asianet Suvarna News

Suvarna FIR : ಭೀಮಾತೀರ, ಜಟ್ಟಿ ಅಮಾವಾಸ್ಯೆ ದಿನ ಪುಡಿ ರಾಜಕಾರಣಿ ತಲೆ ಚಿಪ್ಪೇ ಎಗರಿತ್ತು!

* ಭೀಮಾತೀರದಲ್ಲಿ ಮತ್ತೊಂದು ರಕ್ತ ಚರಿತ್ರೆ
* ರಾಜಕಾರಣದಲ್ಲಿ ಬೆಳೆಯಬೇಕು ಎಂದುಕೊಂಡಿದ್ದವ ಬೀದಿ ಹೆಣವಾದ
* ಒಂದೇ  ಕುಟುಂಬದ ಹದಿಮೂರು ಮಂದಿ ಕತ್ತರಿಸಿ ಹಾಕಿದರು
* ಚೌಡಮ್ಮ ದೇವಿಯ ಆರಾಧನೆ ದಿನವೇ ಘೋರ ಕೃತ್ಯ ನಡೆದಿತ್ತು

ವಿಜಯಪುರ(ಡಿ. 07) ಇದೊಂದು ಬರ್ಬರ (Murder) ಹತ್ಯೆ. ಇಡೀ ಭೀಮಾ ತೀರವೇ ( Bheematheera  Vijayapura) ನಡುಗಿ ಹೋಗಿತ್ತು. ಪ್ರದೀಪ್  ಎಸ್ ಯಂಟಮಾನ ಎನ್ನುವ ರಾಜಕಾರಣಿಯ ಹಿಂದಿನ ದುರಂತ ಕತೆ ಹೇಳುತ್ತೇವೆ.

ಅಕ್ಕನ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದುಕೊಂಡ

 ಜಟ್ಟಿ ಅಮಾವಾಸ್ಯೆ ಹಿಂದಿನ ದಿನ ರಾತ್ರಿ ಊರ  ಹೆಂಗಸರೆಲ್ಲ ಸೇರಿ ಚೌಡಮ್ಮನ ಆರಾಧನೆ ಮಾಡುತ್ತಾರೆ. ಹಾಡು ಹಾಡುತ್ತಾರೆ.  ಹಳೆ  ದ್ವೇಷ ಮತ್ತೆ ಕೆರಳಿತ್ತು.  ಒಂದೆ ಕುಟುಂಬದವರು ಸೇರಿ ಆ ವ್ಯಕ್ತಿಯ ಹತ್ಯೆ ಮಾಡುತ್ತಾರೆ. ಕೊಸರಾಡುವುದಕ್ಕೂ ಬಿಡದೆ ಆತನನನ್ನು ಹದಿಮೂರು ಜನ ಕತ್ತರಿಸಿ  ಹಾಕಿದ್ದರು.