Asianet Suvarna News Asianet Suvarna News

Asianet Suvarna FIR ಸುಂದ್ರಿಗೋಸ್ಕರ ಕಿತ್ತಾಟ, ಇಬ್ಬರಿಗೂ ಆ ಹುಡುಗಿ ಸಿಗದಿದ್ದರೂ ಬಿತ್ತು ಹೆಣ!

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ‌ಘಟನೆ ಬೆಳಗಾವಿ ಹೊರವಲಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿತ್ತು.  ಸುಂದ್ರಿಗೋಸ್ಕರ ಕಿತ್ತಾಟ, ಇಬ್ಬರಿಗೂ ಆ ಹುಡುಗಿ ಸಿಗದಿದ್ದರೂ ಬಿತ್ತು ಹೆಣ!

ಬೆಳಗಾವಿ, (ಜ.19):: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ‌ಘಟನೆ ಬೆಳಗಾವಿ ಹೊರವಲಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿತ್ತು.  

Murder Case: ಹಳೆ ವೈಷಮ್ಯಕ್ಕೆ ಯುವಕನ ಬಲಿ: ನರ​ಗುಂದ​ದಲ್ಲಿ ಬಿಗು​ವಿನ ವಾತಾ​ವ​ರಣ

ನಗರದ ನಿವಾಸಿ ನೋಹಾನ್ ಧಾರವಾಡಕರ್ (23) ಕೊಲೆಯಾದ ಆಟೋ ಚಾಲಕ. ಕಳೆದ 5 ದಿನಗಳ ಹಿಂದೆ ಮನೆಯಿಂದ ಆಟೋ ಸಮೇತ ತೆರಳಿದ್ದ ನೋಹಾನ್ ಮನೆಗೆ ವಾಪಸ್ ಆಗಿರಲಿಲ್ಲ. ಭಾನುವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಆತನ ಆಟೋ ಪತ್ತೆಯಾಗಿದೆ. ಈ ವೇಳೆ, ಹುಡುಕಾಟ ನಡೆಸಿದಾಗ ಪಾಳು ಬಿದ್ದ ಮನೆಯೊಂದರ ಶೌಚಾಲಯದಲ್ಲಿ ನೋಹಾನ್ ಶವ ಪತ್ತೆಯಾಗಿತ್ತು. ಇದೀಗ ಈ ಕೊಲೆಗೆ ಆ ಸುಂದ್ರಿಯೇ ಕಾರಣ ಎನ್ನುವುದು ತಿಳಿದುಬಂದಿದೆ.

Video Top Stories