ಬಿಕ್ಲ ಮರ್ಡರ್​​ ಸೀಕ್ರೆಟ್​​, ರೌಡಿ ಬಿಕ್ಲನ ಕೊಲೆ ಹಿಂದೆ ಪೊಲೀಸ್ ನೆರಳು?

ಬಿಕ್ಲ ಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕರ ಹೆಸರು ತಳಕು ಹಾಕಿಕೊಂಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಹಂತಕರಿಗೆ ಬಿಕ್ಲ ಶಿವನ ಲೊಕೇಷನ್ ಶೇರ್ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.19): ಅದು ಇತ್ತಿಚೆಗೆ ನಡೆದ ಡೆಡ್ಲಿ ಮರ್ಡರ್​ ಕೇಸ್​​.. ಆ ಕೇಸ್‌ನಲ್ಲಿ ಬಿಜೆಪಿಯ ಪ್ರಭಾವಿ ಶಾಸಕರ ಹೆಸರೂ ಕೂಡ ತಳಕು ಹಾಕಿಕೊಂಡಿದೆ.ಯೆಸ್‌.. ನಾವು ಮಾತನ್ನಾಡುತ್ತಿರೋದು ಬಿಕ್ಲ ಶಿವನ ಮರ್ಡರ್​​ ಪ್ರಕರಣದ ಬಗ್ಗೆ.

ಆವತ್ತು ತನ್ನ ಮನೆ ಎದುರಲ್ಲೇ ಬಿಕ್ಲ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ತನಿಖೆ ಆರಂಭಿಸಿದ್ದ ಪೊಲೀಸರು FIRನಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು ಹೆಸರನ್ನೂ ಸೇರಿಸಿಬಿಟ್ಟಿದ್ದರು. ಪ್ರಕರಣ ಸೆನ್ಸೇಶನ್​ ಕ್ರಿಯೇಟ್​​ ಮಾಡುತ್ತಿರುವಾಗಲೇ ಈಗ ಇದೇ ಕೇಸ್​​ ಬಗ್ಗೆ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ಪೊಲೀಸ್​ ಅಧಿಕಾರಿಯೊಬ್ಬ ಹಂತಕರಿಗೆ ಬಿಕ್ಲ ಶಿವನ ಲೊಕೇಷನ್ ಶೇರ್​​ ಮಾಡಿದ್ದರ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಹಾಗಾದ್ರೆ ಬಿಕ್ಲನ ಮರ್ಡರ್​ನಲ್ಲಿ ಪೊಲೀಸರೂ ಇನ್ವಾಲ್ವ್​​ ಆಗಿದ್ರಾ..?

Related Video