
ಕೋಲ ನಡೆಯುವಾಗ್ಲೇ ಬಿತ್ತು ಹೆಣ..ಕೊಲೆಗಾರನ ಬಗ್ಗೆ ದೈವವೇ ಕೊಟ್ತು ಸುಳಿವು..!
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶರತ್ ವಿ ಶೆಟ್ಟಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ಪಂಜುರ್ಲಿ ಬಳಿ ಬೇಡಿಕೆ ಇಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದಲ್ಲಿ ದೈವ ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿ ಶರತ್ ಶೆಟ್ಟಿ ಕೊಲೆಯಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು ತನಿಖೆ ನಡೆಸಿದ ಪೊಲೀಸರು ಕೆಲವರನ್ನ ಅರೆಸ್ಟ್ ಮಾಡಿದ್ದರು. ಕೊಲೆಯ ಕಿಂಗ್ಪಿನ್ ಸಿಗಲಿಲ್ಲ. ಹೀಗಾಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆಗಾರರ ವಿರುದ್ಧ ಕ್ರಮಕ್ಕೆ ಕುಟುಂಬದವರು ದೈವದ ಮೊರೆ ಹೋಗಿದ್ದು, ಕೋಲ ನಡೆಸಿ ಅದೇ ದೈವನ ಬಳಿ ಪ್ರಶ್ನೆ ಇಟ್ಟಿದ್ದಾರೆ. ದೈವ ಕೊಲೆ ಮಾಡಿದವರು ಯಾರು..? ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಕೊಲೆಗಾರನ ಸುಳಿವು ಕೊಟ್ಟಿದೆ. ಹಾಗಾದರೆ ದೈವ ಕೋಲ ಕೊಟ್ಟ ಸುಳಿವೇನು..? ಈ ವಿಡಿಯೋ ನೋಡಿ
Add Asianetnews Kannada as a Preferred Source
