
ಡ್ರಗ್ ಕೇಸ್: ಮಾಜಿ ಸಿಎಂ ಹಾಗೂ ಅವರ ಮಗನಿಗೆ ಕಾಲ್ ಮಾಡಿ ನೆರವು ಕೇಳಿದ್ರಾ ಅನುಶ್ರೀ?
ಕನ್ನಡಿಗರ ಮನೆ ಮಗಳಂತಿರುವ ನಟಿ, ನಿರೂಪಕಿ ಅನುಶ್ರೀ ಡ್ರಗ್ ಕೇಸ್ ವಿಚಾರಣೆಗೆ ಹಾಜರಾಗಿದ್ದಾರೆ. ಅನುಶ್ರೀ ಬಗ್ಗೆ ಸಾಕಷ್ಟು ನೆಗೆಟಿವ್ ವಿಚಾರಗಳು ಹರಿದಾಡಲು ಶುರುವಾಗಿದೆ. ಇದರಿಂದ ನೊಂದಿರುವ ಅನುಶ್ರೀ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರು (ಅ. 03): ಕನ್ನಡಿಗರ ಮನೆ ಮಗಳಂತಿರುವ ನಟಿ, ನಿರೂಪಕಿ ಅನುಶ್ರೀ ಡ್ರಗ್ ಕೇಸ್ ವಿಚಾರಣೆಗೆ ಹಾಜರಾಗಿದ್ದಾರೆ. ಅನುಶ್ರೀ ಬಗ್ಗೆ ಸಾಕಷ್ಟು ನೆಗೆಟಿವ್ ವಿಚಾರಗಳು ಹರಿದಾಡಲು ಶುರುವಾಗಿದೆ. ಇದರಿಂದ ನೊಂದಿರುವ ಅನುಶ್ರೀ ಕಣ್ಣೀರಿಟ್ಟಿದ್ದಾರೆ.
Add Asianetnews Kannada as a Preferred Source

ಅರೆಸ್ಟ್ ಆಗೋದು ಗೊತ್ತಾಗ್ತಿದ್ದಂತೆ, ನಟಿಯಿಂದ ಕೋವಿಡ್ ಹೈಡ್ರಾಮಾ: ಸಂಬರಗಿ ಬಾಂಬ್
'ವಿಚಾರಣೆ ಎದುರಿಸಿದ ಕೂಡಲೇ ನಾನು ಅಪರಾಧಿಯಾಗುವುದಿಲ್ಲ. ಈ ವಿಚಾರದಲ್ಲಿ ಬಿಂಬಿಸಿದ ರೀತಿ ನನಗೆ ನೋವಾಗಿದೆ. ಕನ್ನಡಿಗರು ಕೊಟ್ಟ ಈ ಹೆಸರಿಗೆ ಧಕ್ಕೆ ಬರುವಂತಹ ಕೆಲಸವನ್ನು ನಾನೆಂದಿಗೂ ಮಾಡುವುದಿಲ್ಲ. ಮುಂದೆಯೂ ಮಾಡುವುದಿಲ್ಲ' ಎಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಜೊತೆಗೆ ಈಕೆಯ ಫೋನ್ ಕಾಲ್ಗಳ ಬಗ್ಗೆ ವಿಚಾರಣೆ ನಡೆಸಿದಾಗ ಮಾಜಿ ಸಿಎಂ ಹಾಗೂ ಅವರ ಮಗನಿಗೆ ಕಾಲ್ ಮಾಡಿದ್ದರು? ಎನ್ನಲಾಗಿದೆ. ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ ನೋಡಿ..!