ಹಾಸನ: ವರದಕ್ಷಿಣೆ ಕಿರುಕುಳ, ಮಕ್ಕಳಾಗದಿದ್ದಕ್ಕೆ ಚಿತ್ರಹಿಂಸೆ: ಗೃಹಿಣಿ ನೇಣಿಗೆ ಶರಣು

ಗಂಡನ ಮನೆಯವರ ಕಿರುಕುಳ ತಾಳಲಾರದೇ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ. ಗಂಡನ ಮನೆಯವರೇ ಹತ್ಯೆಮಾಡಿ ನೇಣು ಹಾಕಿರೋದಾಗಿ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ. 

Share this Video
  • FB
  • Linkdin
  • Whatsapp

ಹಾಸನ (ಮೇ. 23): ಗಂಡನ ಮನೆಯವರ ಕಿರುಕುಳ ತಾಳಲಾರದೇ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ. ಗಂಡನ ಮನೆಯವರೇ ಹತ್ಯೆಮಾಡಿ ನೇಣು ಹಾಕಿರೋದಾಗಿ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ. ಮಗಳ ಸಾವಿನಿಂದ ರೊಚ್ಚಿಗೆದ್ದ ಜನರು, ಗಂಡನ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. 

Add Asianetnews Kannada as a Preferred SourcegooglePreferred

ಬೆಂಗಳೂರು: ಕಾರು ಟರ್ನ್ ಮಾಡೋಕ್ ಹೋಗಿ ಬೈಕ್ ಸವಾರನ ಮೇಲೆ ಹತ್ತಿಸಿದ ವೈದ್ಯೆ

ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ(31) ಳನ್ನ ಹಾಸನದ ಅಕ್ಷಯ್ ಗೆ 10 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ರಂಜಿತಾ- ಅಕ್ಷಯ್ ದಂಪತಿಗೆ ಮಕ್ಕಳಾಗಿರಲಿಲ್ಲ. ಇದಕ್ಕಾಗಿ ರಂಜಿತಾಗೆ ಚಿತ್ರಹಿಂಸೆ ಕೊಡುತ್ತಿದ್ದರಂತೆ ಅಕ್ಷಯ್ ಕುಟುಂಬ. ಅಕ್ಷಯ್ ತಂದೆ ಅಶೋಕ್ ಸಹ ರಂಜಿತಾಗೆ ತೊಂದರೆ ಕೊಡುತ್ತಿದ್ದರಂತೆ. ರಂಜಿತಾ , ಪೊಲೀಸ್ ಠಾಣೆಗೂ ಈ ಹಿಂದೆ ದೂರು ನೀಡಿ ರಾಜೀ ಪಂಚಾಯ್ತಿ ನಡೆದಿತ್ತು. ಆದರೂ ಸಂಸಾರ ಸಂಬಂಧ ಸರಿಹೋಗಿರಲಿಲ್ಲ. ಗಂಡ, ಮಾವ ಸೇರಿ ಕೊಲೆ ಮಾಡಿ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಹೆಣ ಇರಿಸಿದ್ದಾರೆಂದು ರಂಜಿತಾ ಪೋಷಕರ ಆರೋಪಿಸಿದ್ದಾರೆ. 

Related Video