
ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್ ತಿಂದಿದ್ರು..!
ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬರು ಮನೆಯ ಬಾಗಿಲು ತೆರೆಯದಿದ್ದಾಗ, ಅನುಮಾನಗೊಂಡ ನೆರೆಮನೆಯವರು ಮಗನಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮಗ, ಮನೆಯ ಹಂಚು ತೆಗೆದು ನೋಡಿದಾಗ ತಾಯಿ ಶವವಾಗಿ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಬೆಂಗಳೂರು (ಡಿ.3): ಒಂಟಿ ಜೀವನ ನಡೆಸುತ್ತಿದ್ದ ವೃದ್ಧೆ ಆಕೆ.ಗಂಡ ಮೂರು ವರ್ಷದ ಹಿಂದೆ ಆ್ಯಕ್ಸಿಡೆಂಟ್ನಲ್ಲಿ ತೀರಿ ಹೋದ್ರೆ ಇದ್ದೊಬ್ಬ ಮಗ ಸೊಸೆಯ ಜೊತೆ ಬೇರೆ ಊರಿಗೆ ಹೋಗಿ ಸೆಟಲ್ ಆಗಿದ್ದ ಅಜ್ಜಿ ಒಬ್ಬಳೇ ಆ ಮನೆಯಲ್ಲಿದ್ದು.
ಆವತ್ತೊಂದು ದಿನ ಆ ಅಜ್ಜಿಯನ್ನ ಮಾತನ್ನಾಡಿಸಲು ಬೆಳ್ಳಂಬೆಳಗ್ಗೆ ಎದುರು ಮನೆಯ ಮಹಿಳೆ ಬಂದಿದ್ದಾಳೆ. ಬಾಗಿಲು ಬಡಿದರೆ ಅಜ್ಜಿ ತೆಗೆಯೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನೋ ರೆಸ್ಪಾನ್ಸ್. ಅನುಮಾನ ಬಂದು ಆಕೆಯ ಮಗನಿಗೆ ಕಾಲ್ ಮಾಡ್ತಾರೆ. ಮಗ ಬಂದಾಗಲೂ ಅಜ್ಜಿ ಬಾಗಿಲು ತೆಗೆಯೋದಿಲ್ಲ.
ಆಗ ಮಗ ಮನೆ ಮೇಲಿನ ಹಂಚನ್ನ ತಗೆದು ನೋಡ್ತಾನೆ. ಆಗ ಅಜ್ಜಿ ಹೆಣವಾಗಿರೋದು ಗೊತ್ತಾಗುತ್ತೆ. ಪೊಲೀಸ್ ಕಂಪ್ಲೆಂಟ್ ಆಗುತ್ತೆ. ಪೊಲೀಸರು ಬಂದು ಪರಿಶೀಲಿಸಿದಾಗ ಅದೊಂದು ಡೆಡ್ಲಿ ಮರ್ಡರ್ ಅನ್ನೋದು ಗೊತ್ತಾಗುತ್ತೆ.