Asianet Suvarna News Asianet Suvarna News

ಮಲಗಿದ್ದ ಮಗು ಮೇಲೆ ಬಿದ್ದ ಕಲ್ಲು, ಕಂದಮ್ಮ ಸಾವು: 2 ಲಕ್ಷ ರೂ.ನೆರವು ನೀಡಿದ ಸಚಿವ ಜಮೀರ್ ಅಹ್ಮದ್

ಮನೆ ಮೇಲಿನ ಕಲ್ಲು ಬಿದ್ದು ಮೃತಪಟ್ಟ ಬಾಲಕ ತೇಜಸ್
ಮೃತ ಬಾಲಕನ ಮನೆಗೆ ಸಚಿವ ಜಮೀರ್ ಅಹ್ಮದ್ ಭೇಟಿ 
ಶಾಸಕ ಶ್ರೀನಿವಾಸ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ 

ವಿಜಯನಗರ: ಜಿಲ್ಲೆಯ ರಾಯಪುರದಲ್ಲಿ ಮಲಗಿದ್ದ ಮಗು (Child) ಮೇಲೆಯೇ ಕಲ್ಲು ಬಿದ್ದು ಮೃತಪಟ್ಟಿರುವ(Died) ಘಟನೆ ನಡೆದಿದೆ. ಮನೆಯ ಮೇಲ್ಭಾಗದ ಕಲ್ಲು ಮಗು ತೇಜಸ್‌ ಮೇಲೆ ಬಿದ್ದಿದೆ. ಮೃತ ಬಾಲಕನ ಮನೆಗೆ ಸಚಿವ ಜಮೀರ್ ಅಹ್ಮದ್ (Zameer Ahmed), ಶಾಸಕ ಶ್ರೀನಿವಾಸ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಎರಡು ಲಕ್ಷ ರೂಪಾಯಿ ನೆರವು ನೀಡುವ ಭರವಸೆಯನ್ನು ನೀಡಿದರು. ಜೊತೆಗೆ ಸಿಎಂ ಪರಿಹಾರ ನಿಧಿಯಿಂದ ನೆರವು ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಹಾಗೂ ಮನೆಯನ್ನು ಕಟ್ಟಿಸಿಕೊಡುವ ಭರವಸೆ ಸಹ ನೀಡಿದ್ದಾರಂತೆ.

ಇದನ್ನೂ ವೀಕ್ಷಿಸಿ:  ಕೋಲಾರಮ್ಮ ಕೆರೆಗೆ ಜಿಲ್ಲಾಡಳಿತದಿಂದ ಆಧುನಿಕ ಸ್ಪರ್ಶ: 600 ಎಕರೆ ಕೆರೆಗೆ ಕೋಟಿ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ