
ಒಂದು ಕೊಲೆ... ಎರಡು ವಾದ...ಚಂದ್ರು ಕೊಲೆಗೆ ಕೋಮು ಬಣ್ಣ
ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಚಂದ್ರು ಕೊಲೆ ಪ್ರಕರಣ ಕೋಮು ಬಣ್ಣ ಹಚ್ಚಿದ್ದಾರೆ. ಉರ್ದು ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಚಂದ್ರುನನ್ನು ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಹಾಗಾದ್ರೆ, ಕಮಿಷನರ್ ಸುಳ್ಳು ಹೇಳಿದ್ರಾ? ಗೃಹ ಸಚಿವರು ಹೇಳಿದ್ದು ಸತ್ಯನಾ?
ಬೆಂಗಳೂರು, (ಏ.09): ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಕೊಲೆ ಪ್ರಕರಣ ಕೋಮು ಬಣ್ಣಕ್ಕೆ ತಿರುಗಿಸಲಾಗಿದೆ. ಉರ್ದು ಬರಲ್ಲ ಅಂತ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, ನಂತರ ಬೈಕ್ ಟಚ್ ಆಗಿದ್ದರಿಂದ ಕೊಲೆ ಆಗಿತ್ತು ಎಂದು ಹೇಳಿಕೆ ಬದಲಿಸಿದ್ದರು. ಇದನ್ನು ಸ್ವತಃ ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದರು.
'ಚಂದ್ರು ಕೊಲೆ ಬಗ್ಗೆ ಗೃಹ ಸಚಿವರು ಸತ್ಯ ಹೇಳ್ತಿದ್ದಾರೆ, ಪೊಲೀಸ್ರು ಹೇಳಿದ್ದು ಸುಳ್ಳು'
ಆದ್ರೆ, ಇದೀಗ ಇದಕ್ಕೆ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಚಂದ್ರು ಕೊಲೆ ಪ್ರಕರಣ ಕೋಮು ಬಣ್ಣ ಹಚ್ಚಿದ್ದಾರೆ. ಉರ್ದು ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಚಂದ್ರುನನ್ನು ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಹಾಗಾದ್ರೆ, ಕಮಿಷನರ್ ಸುಳ್ಳು ಹೇಳಿದ್ರಾ? ಗೃಹ ಸಚಿವರು ಹೇಳಿದ್ದು ಸತ್ಯನಾ?