Asianet Suvarna News Asianet Suvarna News

ಪತ್ನಿ, ಮಗನಿಂದಲೇ ಕುಟುಂಬ ಸರ್ವನಾಶ ಎಂದ ಶಂಕರ್, ಡೆತ್‌ನೋಟ್ ಹೇಳುವುದೇ ಬೇರೆ ಕತೆ!

ನನ್ನ ಕುಟುಂಬದ ಮಹಾ ದುರಂತಕ್ಕೆ ಪತ್ನಿ ಹಾಗೂ ಮಗನೇ ಕಾರಣ ಎಂದು ಆರೋಪಿಸಿ ಶಂಕರ್‌ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಸೆ. 19): ನನ್ನ ಕುಟುಂಬದ ಮಹಾ ದುರಂತಕ್ಕೆ ಪತ್ನಿ ಹಾಗೂ ಮಗನೇ ಕಾರಣ ಎಂದು ಆರೋಪಿಸಿ ಶಂಕರ್‌ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಸ್ ಸುಸೈಡ್‌ನಲ್ಲಿ ಬಿಗ್ ಟ್ವಿಸ್ಟ್‌; ಮಹಿಳೆಯರ ಮೇಲೆ ದೌರ್ಜನ್ಯ.. ಅನೈತಿಕ ಸಂಬಂಧ!

ನನ್ನ ಮೂವರು ಮಕ್ಕಳು ವಿದ್ಯಾವಂತರು. ಸಣ್ಣಪುಟ್ಟವಿಚಾರಗಳಿಗೂ ಕೌಟುಂಬಿಕ ಕಲಹ ನಡೆಯುತ್ತಿತ್ತು. ಅವೆರಲ್ಲ ಸಮಾಧಾನದಿಂದ ವರ್ತಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು. ನನ್ನ ಪತ್ನಿ ಭಾರತಿ ಹಾಗೂ ಮಗ ಮಧು ಸಾಗರ್‌ ಪ್ರಚೋದನೆಗೊಳಗಾಗಿ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ನನ್ನ ಬೀಗರು ಹಾಗೂ ಅಳಿಯಂದಿರ ಪಾತ್ರವಿಲ್ಲ. ಇದಕ್ಕೆ ಪತ್ನಿ ಹಾಗೂ ಮಗನೇ ಕಾರಣ ಹೊರತು ಮತ್ಯಾರು ಅಲ್ಲ ಎಂದು ಶಂಕರ್‌ ಹೇಳಿದ್ಧಾರೆ. ಆದರೆ ಮನೆಯಲ್ಲಿ ಸಿಕ್ಕ ಡೆತ್‌ನೋಟ್‌ ಬೇರೆಯ ಕಥೆಯನ್ನು ಹೇಳುತ್ತದೆ. ಶಂಕರ್ ಬಗ್ಗೆ ಡೆತ್‌ನೋಟ್‌ನಲ್ಲಿ ದೂರಲಾಗಿದೆ. 

Video Top Stories