Asianet Suvarna News Asianet Suvarna News

Rajinikanth: ಮಂಗಳೂರಿಗೆ ತಲೈವಾ ಆಗಮನ: ಭದ್ರತೆ ಇಲ್ಲದೆ ರಜನಿ ಏಕಾಂಗಿ ಪಯಣ

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಎರಡು ದಿನಗಳ ಭೇಟಿಗೆ ಭಾನುವಾರ ಕರಾವಳಿಗೆ ಆಗಮಿಸಿದ್ದಾರೆ. 

First Published Feb 13, 2023, 4:09 PM IST | Last Updated Feb 13, 2023, 4:09 PM IST

ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಬಂದಿಳಿದಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಅಲ್ಲಿಂದ ಅಭಿಮಾನಿಗಳಿಗೆ ಕೈಬೀಸುತ್ತಾ ಖಾಸಗಿ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರಜನಿಕಾಂತ್ ಅವರು ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಒಂದರಲ್ಲಿ ನಟಿಸಲು ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸಿನಿಮಾದ ಚಿತ್ರೀಕರಣ ಕರಾವಳಿಯಲ್ಲಿ ನಡೆಯುತ್ತಿದ್ದು, ಶಿವರಾಜ್ ಕುಮಾರ್ ಕೂಡ ಜತೆಯಾಗಿಯೇ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಯಾವುದೇ ಭದ್ರತೆ ಇಲ್ಲದೇ ಏಕಾಂಗಿಯಾಗಿ ಪಯಣ ಆರಂಭಿಸಿದ್ದಾರೆ‌.

ಫಿಲ್ಮ್​ ಸಿಟಿ ನಿರ್ಮಾಣ ಆಗಬೇಕು: ನಮೋ ಮುಂದೆ ಸಿನಿಮಾರಂಗದ ಗಣ್ಯರ ಬೇಡಿಕೆ