Asianet Suvarna News Asianet Suvarna News

ಭಾರತೀಯ ಚಿತ್ರರಂಗದ ಉಗಮದ ಬಗ್ಗೆ ರಾಜಮೌಳಿ ಸಿನಿಮಾ: ಹೇಗಿರುತ್ತೆ ಸಿನಿಮಾ, ನಟಿಸುತ್ತಿರುವುದು ಯಾರು?

ರಾಜಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಸಾಕು ಇಡೀ ಜಗತ್ತು ಆ ಸಿನಿಮಾದತ್ತ ಕಣ್ಣಿಟ್ಟಿರುತ್ತೆ. ಬಾಹುಬಲಿಯಿಂದ ಸೌತ್ ಸಿನಿದುನಿಯಾಗೆ ವಿಶ್ವಾಧ್ಯಂತ ದೊಡ್ಡ ಮಾರ್ಕೆಟ್ ಓಪನ್ ಆಗೊ ಹಾಗೆ ಮಾಡಿದ್ರು. 

ರಾಜಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಸಾಕು ಇಡೀ ಜಗತ್ತು ಆ ಸಿನಿಮಾದತ್ತ ಕಣ್ಣಿಟ್ಟಿರುತ್ತೆ. ಬಾಹುಬಲಿಯಿಂದ ಸೌತ್ ಸಿನಿದುನಿಯಾಗೆ ವಿಶ್ವಾಧ್ಯಂತ ದೊಡ್ಡ ಮಾರ್ಕೆಟ್ ಓಪನ್ ಆಗೊ ಹಾಗೆ ಮಾಡಿದ್ರು. ಆರ್ ಆರ್ ಆರ್ ಸಿನಿಮಾದಿಂದ ನಮಗೆಲ್ಲಾ ಯಾವತ್ತೂ ಬರೊಲ್ಲ ಅಂದುಕೊಂಡಿದ್ದ ಆಸ್ಕರ್ ಅವಾರ್ಡ್ನ್ನೆ ತಂದುಕೊಟ್ಟುಬಿಟ್ರು. ಈಗ ಭಾರತೀಯ ಚಿತ್ರರಂಗದ ಉಗಮದ ಬಗ್ಗೆ ರಾಜ ಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಯೋಚನೆ ಮಾಡಿ ಹೇಗಿರಬಹುದು. ಭಾರತೀಯ ಚಿತ್ರರಂಗದ ಆರಂಭದ ಕಾಲದಲ್ಲಿ ಇಂಡಸ್ಟ್ರಿ ಹೇಗಿತ್ತು. ಸಿನಿಮಾ ಪರಿಕರಗಳಿಲ್ಲದೆ ಎಷ್ಟೆಲ್ಲಾ ಕಷ್ಟ ಪಟ್ಟರು. ತಾಂತ್ರಿಕವಾಗಿ ಏನೂ ಇಲ್ಲದ ಕಾಲದಲ್ಲಿ ನಮ್ಮ ಭಾರತೀಯ ಸಿನಿಪಂಡಿತರು ಹೇಗೆಲ್ಲಾ ಸಿನಿಮಾ ಮಾಡುತ್ತಿದ್ದರು.. ಕೇಳೋಕೆ ಬಹಳ ಕುತೂಹಲವಾಗಿದೆ. 

ಇನ್ನು ಇದನ್ನು ನೋಡೋಕೆ ಹೇಗಿರಬಹುದು..? ಹೌದು. ನಿರ್ದೇಶಕ ರಾಜಮೌಳಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅರೇ ಹಾಗಾದ್ರೆ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡಲ್ವಾ? ಅಂದುಕೊಳ್ಳಬೇಡಿ. ಮಹೇಶ್ ಬಾಬು  ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಗ್ಯಾಪ್ನಲ್ಲಿ ರಾಜಮೌಳಿ ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಮಾಡಿದ್ದಾರೆ. ರಾಜಮೌಳಿ ಮಗ ಕಾರ್ತಿಕೇಯ ಸೇರಿ ಅನೇಕರನ್ನು ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ‘ಬರ್ತ್ ಆ್ಯಂಡ್ ರೈಸ್ ಆಫ್ ಇಂಡಿಯನ್ ಸಿನಿಮಾ’ ಎನ್ನುವ ಶೀರ್ಷಿಕೆ ಇಡಲು ರಾಜಮೌಳಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.  ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ, ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

Video Top Stories