
ಹಳದಿ ಶಾಸ್ತ್ರದಲ್ಲಿ ಅರಿಶಿಣವೇ ಬಳಸಿಲ್ವಾ? ಕೃತಿ ಖರಬಂಧ ಅರಿಶಿಣ ಶಾಸ್ತ್ರ ಹೀಗ್ಯಾಕೆ..?
ಕೃತಿ ಕರಬಂಧ ಕನ್ನಡದ ಗೂಗ್ಲಿ ಚಿತ್ರದ ಜೊತೆಗೆ, ಬಾಲಿವುಡ್ನಲ್ಲಿ ಪಾಗಲ್ ಪಂತಿ, ಹೌಸ್ಫುಲ್ 4, ರಾಜ್ ರಿಬೂಟ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ನಟನಟಿಯರಾದ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಮಾರ್ಚ್ 15 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಜೋಡಿಯು ಒಂದೊಂದಾಗಿ ತಮ್ಮ ವಿವಾಹ ಪೂರ್ವ ಸಮಾರಂಭದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ತಮ್ಮ ಮದುವೆಯ ಚಿತ್ರಗಳನ್ನು ಅನಾವರಣಗೊಳಿಸಿದ ನಂತರ, ಅವರು ತಮ್ಮ ಹಳದಿ ಸಮಾರಂಭದ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಹಳದಿಯು ಸಗಣಿಯಂತೆ ಕಾಣ್ತಿದೆ. ಇದಕ್ಕೆ ಜೋಡಿ ಕಾರಣ ನೀಡಿದೆ.'ನಮ್ಮ ಹಳದಿ ಕೊಂಚ ಅಸಂಪ್ರದಾಯಿಕವಾಗಿತ್ತು. ನಾವು ಹಳದಿ ಬದಲಿಗೆ ಮುಲ್ತಾನಿ ಮಿಟ್ಟಿ ಬಳಸಿ ಅದಕ್ಕೇ ಚಿಟಿಕೆ ಹಳದಿ ಬೆರೆಸಿದ್ದೆವು' ಎಂದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ