Asianet Suvarna News Asianet Suvarna News

ಸಾಯಿ ಪಲ್ಲವಿಗೆ ಬಾಡಿಗಾರ್ಡ್ ಆದ ರಾಣಾ ದಗ್ಗುಬಾಟಿ

ನಟಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಇತ್ತೀಚಿಗೆ ಸಮಾರಂಭವೊಂದರಲ್ಲಿ ಸಾಯಿ ಪಲ್ಲವಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬ ಏಕಾಏಕಿ ಸ್ಟೇಜ್ ಹತ್ತಿ ಬಂದರು. ಆಗ ಪಕ್ಕದಲ್ಲೇ ಇದ್ದ ರಾಣಾ ಸಾಯಿ ಪಲ್ಲವಿಯನ್ನು ರಕ್ಷಿಸಿದರು. 

ನಟಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಇತ್ತೀಚಿಗೆ ಸಮಾರಂಭವೊಂದರಲ್ಲಿ ಸಾಯಿ ಪಲ್ಲವಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬ ಏಕಾಏಕಿ ಸ್ಟೇಜ್ ಹತ್ತಿ ಬಂದರು. ಆಗ ಪಕ್ಕದಲ್ಲೇ ಇದ್ದ ರಾಣಾ ಸಾಯಿ ಪಲ್ಲವಿಯನ್ನು ರಕ್ಷಿಸಿದರು. ಅಭಿಮಾನಿಗಳು ಈ ರೀತಿ ವರ್ತಿಸುವುದು ಇದೇ ಮೊದಲಲ್ಲ. ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಸಖತ್ ಕ್ರೇಜಿ. ಅಲ್ಲು ಅರ್ಜುನ್ ಕಂಡ ತಕ್ಷಣ ಏಕಾಏಕಿ ಅಭಿಮಾನಿಯೊಬ್ಬ ವೇದಿಕೆ ಹತ್ತಿ ಬಂದು ತಬ್ಬಿಕೊಂಡಿದ್ದ. ಅವನನ್ನ ವೇದಿಕೆ ಇಳಿಸಲು ಪ್ರಯತ್ನ ಪಟ್ಟರು ಸಾಧ್ಯವೇ ಆಗುವುದಿಲ್ಲ. ಫೈನಲ್ ಆಗಿ ಅಭಿಮಾನಿಯ ಅಭಿಮಾನಕ್ಕೆ ಅಲ್ಲು ಅರ್ಜನ್ ಮನಸ್ಸು ಕರಗಿ ಮಾತನಾಡಿಸಿ ಕಳುಹಿಸಿದರು. ನಟ ಸೂರ್ಯನನ್ನು ನೋಡಲು ಬಂದ ಅಭಿಮಾನಿಯ ಕಾಲಿಗೆ ಸೂರ್ಯ ಬಿದ್ದಿದ್ದರು. ತನ್ನ ಕಾಲಿಗೆ ಬಿದ್ದ ಫ್ಯಾನ್ಸ್ ಗಳ ಕಾಲು ಮುಟ್ಟಿ ನಮಸ್ಕಾರ ಮಾಡಿಕೊಳ್ಳೊದ್ರ ಜೊತೆಗೆ ಡ್ಯಾನ್ಸ್ ಮಾಡಿ ಫೋಟೋ ಕೂಡ ತೆಗೆಸಿಕೊಂಡು ಕಲುಹಿಸಿದ್ದರು. ಹೀಗೆ ಅಭಿಮಾನಿ ಮತ್ತು ನಟರ ನಡುವೆ ಅನೇಕ ಘಟನೆಗಳು ನಡೆದಿವೆ. 

Video Top Stories