Karnataka Budget: ಕೇಂದ್ರ ಸರ್ಕಾರದ ವಿರುದ್ಧ ಆರೋಪ: ಬಿಜೆಪಿ ಸದಸ್ಯರ ಆಕ್ಷೇಪ..ಬಜೆಟ್‌ ಓದುವಾಗ ಜೋರು ಗದ್ದಲ

ಸಿಎಂ ಸಿದ್ದರಾಮಯ್ಯ ಅವರು 15ನೇ ಬಜೆಟ್‌ ಮಂಡಿಸುವಾಗ ಕೇಂದ್ರ ಸರ್ಕಾರದ ವಿರುದ್ಧ ಆರೋಪವನ್ನು ಮಾಡಿದ್ರು. ಹೀಗಾಗಿ ಬಜೆಟ್ ಓದುವಾಗ ಜೋರು ಗದ್ದಲ ಉಂಟಾಯಿತು.

Share this Video
  • FB
  • Linkdin
  • Whatsapp

ಬೆಂಗಳೂರು: ಬಜೆಟ್‌ನಲ್ಲೂ(Karnataka Budget) ಕೇಂದ್ರ ಸರ್ಕಾರದ (Central government)ವಿರುದ್ಧ ಆರೋಪ ಮಾಡಲಾಗಿದೆ. ತೆರಿಗೆ ಹಂಚಿಕೆಯಲ್ಲಿ(Tax distribution) ಅನ್ಯಾಯ ಆಗುತ್ತಿದೆ ಎಂಬ ಅಂಶವನ್ನು ಸಿಎಂ ಸಿದ್ದರಾಮಯ್ಯ(Siddaramaiah) ಪ್ರಸ್ತಾಪ ಮಾಡಿದರು. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷವೇ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದೆ. ಈ ಕಾರಣಕ್ಕಾಗಿ ಅವರೂ ಧ್ವನಿ ಎತ್ತಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ಸಾಲನ್ನು ಓದುವಾಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಓದುವಾಗ ಜೋರು ಗದ್ದಲವನ್ನು ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಇತರೆ ಬಿಜೆಪಿ(BJP) ಸದಸ್ಯರು ಆರಂಭಿಸಿದರು. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡಲು 10 ಕೋಟಿ ರೂ. ಒದಗಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ನಾನು ಯಶ್‌ ತುಂಬಾ ಒಳ್ಳೆ ಸ್ನೇಹಿತರು, ಗೂಗ್ಲಿ ಸಿನಿಮಾದಲ್ಲಿ ಫ್ರೆಂಡ್‌ ಆಗಿ ನಟಿಸಿದ್ದೇನೆ: ನಟ ಅಶೋಕ್ ಶರ್ಮಾ

Related Video