11:27 PM (IST) Dec 26

Karnataka News Live 26th December:ಅರಾವಳಿ ಉಳಿಸಿ - ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!

ಅರಾವಳಿ ಪರ್ವತ ಶ್ರೇಣಿಯನ್ನು ಗಣಿಗಾರಿಕೆ ಮಾಫಿಯಾದಿಂದ ರಕ್ಷಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ 'ಅರಾವಳಿ ಸತ್ಯಾಗ್ರಹ' ಎಂಬ 1,000 ಕಿ.ಮೀ. ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಈ ಹೋರಾಟದ ಮೂಲಕ, ಅಕ್ರಮ ಗಣಿಗಾರಿಕೆ ನಿಲ್ಲಿಸುವುದು ಮತ್ತು ಅರಾವಳಿ 'ನಿರ್ಣಾಯಕ ಪರಿಸರ ವಲಯ' ಎಂದು ಘೋಷಿಸುವಂತೆ ಒತ್ತಾಯ.

Read Full Story
11:00 PM (IST) Dec 26

Karnataka News Live 26th December:ಹುಂಜಾ ಕಣಿವೆ - ಇಲ್ಲಿನ ಮಹಿಳೆಯರು 65ರ ಪ್ರಾಯದಲ್ಲೂ ಮಕ್ಕಳಿಗೆ ಜನ್ಮ ನೀಡಬಲ್ಲರು! ವಯಸ್ಸನ್ನೇ ಸೋಲಿಸಿದ ಸುಂದರಿಯರ ರಹಸ್ಯವೇನು?

ಹಿಮಾಲಯದ ತಪ್ಪಲಿನಲ್ಲಿರುವ ಹುಂಜಾ ಕಣಿವೆಯ ಮಹಿಳೆಯರು 70ರ ಹರೆಯದಲ್ಲೂ ಯುವತಿಯರಂತೆ ಕಾಣುತ್ತಾರೆ. ಅವರ ಈ ವಯಸ್ಸಾಗದ ಸೌಂದರ್ಯ ಮತ್ತು 120 ವರ್ಷಗಳ ದೀರ್ಘಾಯುಷ್ಯದ ಹಿಂದೆ ಯಾವುದೇ ಕೃತಕ ವಿಧಾನಗಳಿಲ್ಲ, ಬದಲಾಗಿ ನೈಸರ್ಗಿಕ ಆಹಾರ, ಶುದ್ಧ ನೀರು ಮತ್ತು ಒತ್ತಡ ರಹಿತ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ.
Read Full Story
10:35 PM (IST) Dec 26

Karnataka News Live 26th December:ನಿಮ್ಮ ಗ್ಯಾಸ್ ಗೀಸರ್ ಸುರಕ್ಷಿತವಾಗಿದೆಯೇ? ಈ ವಿಷಯ ತಿಳ್ಕೊಳ್ಳಿ, ದೊಡ್ಡ ಅನಾಹುತ ತಪ್ಪಿಸಿ!

ಚಳಿಗಾಲದಲ್ಲಿ ಗ್ಯಾಸ್ ಗೀಸರ್ ಬಳಕೆ ಅಪಾಯಕಾರಿ. ಮುಚ್ಚಿದ ಸ್ನಾನಗೃಹದಲ್ಲಿ ವಾತಾಯನವಿಲ್ಲದಿದ್ದರೆ, ಕಾರ್ಬನ್ ಮಾನಾಕ್ಸೈಡ್ ಅನಿಲದಿಂದ ಪ್ರಾಣಾಪಾಯ ಸಂಭವಿಸಬಹುದು. ಸುರಕ್ಷತೆಗಾಗಿ ಸರಿಯಾದ ವಾತಾಯನ, ಎಚ್ಚರಿಕೆಯ ಅಳವಡಿಕೆ ಮತ್ತು ನಿಯಮಿತ ಪರಿಶೀಲನೆ ಅತ್ಯಗತ್ಯ.
Read Full Story
10:22 PM (IST) Dec 26

Karnataka News Live 26th December:ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ

ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಇದೇ ವೇಳೆ ಮೃತ ವ್ಯಾಪಾರಿ ಸಲೀಂ ಮೇಲೆ ಅನುಮಾನಗಳು ಹೆಚ್ಚುತ್ತಿದೆ. ಇದಕ್ಕೆ ಕೆಲ ಕಾರಣಗಳು ಇವೆ.

Read Full Story
10:05 PM (IST) Dec 26

Karnataka News Live 26th December:Karna Serial - ಎಲ್ಲ ಖುಷಿಯಿಂದ ಇರ್ಬೇಕಿದ್ರೆ, ಈ ಥರ ಮಾಡಿದ್ರೆ ಚೆನ್ನಾಗಿರಲ್ಲ - ಡೈರೆಕ್ಟರ್‌ಗೆ ವಾರ್ನಿಂಗ್

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಮರಳಿ ಬಂದಾಗಿದೆ, ನಿತ್ಯಾ ಹಾಗೂ ತೇಜಸ್‌ ಮದುವೆ ಮಾಡಿಸಬೇಕು ಎಂದು ಕರ್ಣ ರೆಡಿಯಾಗಿದ್ದಾನೆ. ಅಷ್ಟರೊಳಗಡೆ ನಿತ್ಯಾ ಮಗುವಿಗೆ ತೊಂದರೆ ಆಗುವ ಸಂದರ್ಭ ಬಂದಿದೆ. ಹಾಗಾದರೆ ಮುಂದೆ ಏನಾಗಲಿದೆ?

Read Full Story
09:40 PM (IST) Dec 26

Karnataka News Live 26th December:ಲಕ್ನೋ - ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೂಕುಂಡಗಳ ಲೂಟಿ; ವಿಡಿಯೋ ವೈರಲ್

ಪ್ರಧಾನಿ ಮೋದಿ ಲಕ್ನೋ ಭೇಟಿಯ ನಂತರ, ಕಾರ್ಯಕ್ರಮದ ವೇದಿಕೆಯನ್ನು ಅಲಂಕರಿಸಲು ತಂದಿದ್ದ ಹೂವಿನ ಕುಂಡಗಳನ್ನು ಸ್ಥಳೀಯರು ಕದ್ದೊಯ್ದಿದ್ದಾರೆ. ಸ್ಕೂಟರ್ ಮತ್ತು ಬೈಕ್‌ಗಳಲ್ಲಿ ಬಂದು ಜನರು ಹೂವಿನ ಗಿಡಗಳನ್ನು ಕೊಂಡೊಯ್ಯುತ್ತಿರುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Read Full Story
09:29 PM (IST) Dec 26

Karnataka News Live 26th December:Amruthadhaare Serial - ಶಾಶ್ವತವಾಗಿ ಭೂಮಿ-ಗೌತಮ್‌ನನ್ನು ದೂರ ಮಾಡಿದ್ನಾ JD ಅಲ್ಲ ಕೇಡಿ ಜಯದೇವ್!

ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ಈಗ ಮತ್ತೊಮ್ಮೆ ತನ್ನ ಕೇಡಿ ಬುದ್ಧಿ ಪ್ರದರ್ಶನ ಮಾಡಿದ್ದಾನೆ. ಅಜ್ಜಿ ಅವಳ ಆಸ್ತಿಯನ್ನು ಗೌತಮ್‌ಗೆ ಬರೆದಮೇಲೆ ಅವನಿಗೆ ಆಕಾಶ್‌ ಎಂಬ ಅಸ್ತ್ರ ಸಿಕ್ಕಿದೆ. ಮೋಸದಿಂದ ಅವನು ಆಕಾಶ್‌ನನ್ನು ಮನೆಗೆ ಕರೆದುಕೊಂಡು ಬಂದು, ಇನ್ನಷ್ಟು ಆಸ್ತಿ ಕಬಳಿಸುವ ಪ್ಲ್ಯಾನ್‌ ಮಾಡಿದ್ದಾನೆ.

Read Full Story
09:23 PM (IST) Dec 26

Karnataka News Live 26th December:ಹಾವೇರಿ - ಅಕ್ಕಿ ಕಳ್ಳರ ಪಾಲಾಗುತ್ತಿದೆ ಬಡವರ 'ಅನ್ನಭಾಗ್ಯ'; ಸಿಎಂ ಸಿದ್ದರಾಮಯ್ಯ ಅವರೇ ಇಲ್ನೋಡಿ!

ಹಾವೇರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ದಂಧೆ ಬಯಲಾಗಿದ್ದು, ಕುಖ್ಯಾತ ಅಕ್ಕಿ ಕಳ್ಳ ಸಚಿನ್ ಕಬ್ಬೂರ್‌ನಿಂದ 63 ಟನ್ ಅಕ್ಕಿ ಮತ್ತು 50 ಕ್ವಿಂಟಾಲ್ ಗೋಧಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಹಲವು ಪ್ರಕರಣಗಳಿದ್ದರೂ ಕ್ರಮವಿಲ್ಲ!

Read Full Story
08:43 PM (IST) Dec 26

Karnataka News Live 26th December:ಹಾವೇರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಸಿಸೆರಿಯನ್‌ ಹೆರಿಗೆ ವೇಳೆ ಮಗುವಿನ ತಲೆ ಕೊಯ್ದ ಡಾಕ್ಟರ್!

ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೆರಿಯನ್ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ತಲೆಗೆ ಬ್ಲೇಡ್ ತಗುಲಿ ಗಾಯವಾಗಿದೆ. ನಾರ್ಮಲ್ ಡೆಲಿವರಿ ಸಾಧ್ಯವಿಲ್ಲವೆಂದು ಹೇಳಿ ಆಪರೇಷನ್ ಮಾಡಲಾಗಿದ್ದು, ಘಟನೆಯ ನಂತರ ವೈದ್ಯರು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

Read Full Story
08:38 PM (IST) Dec 26

Karnataka News Live 26th December:ಕಾರವಾರ - ಡಿ.28 ರಂದು ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ಸಬ್‌ಮರೀನ್‌ನಲ್ಲಿ ಪ್ರಯಾಣ!

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28 ರಂದು ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಐಎನ್ಎಸ್ ವಿಕ್ರಾಂತ್ ಯುದ್ಧನೌಕೆ ಹಾಗೂ ಸಬ್‌ಮರೀನ್ ವೀಕ್ಷಿಸಲಿದ್ದು, ಭದ್ರತಾ ದೃಷ್ಟಿಯಿಂದ ಕಾರವಾರ-ಅಂಕೋಲಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

Read Full Story
07:45 PM (IST) Dec 26

Karnataka News Live 26th December:ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್

ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಭಾರಿ ಬದಲಾವಣೆ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಇದೀಗ ಐಪಿಎಲ್ ಮರಳಿ ತರಲು ಪ್ರಯತ್ನದಲ್ಲಿ ಆರಂಭಿಕ ಯಶಸ್ಸು ಕಂಡಿದ್ದಾರೆ.

Read Full Story
07:34 PM (IST) Dec 26

Karnataka News Live 26th December:ರೋಡಲ್ಲಿ ಹೋಗುತ್ತಿದ್ದ 7 ವರ್ಷದ ಬಾಲಕಿಗೆ ಗುದ್ದಿದ ಕಾರು, 10 ಅಡಿ ದೂರಕ್ಕೆ ಹಾರಿಬಿದ್ದ ಮಗು!

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ರಸ್ತೆ ದಾಟುತ್ತಿದ್ದ ಏಳು ವರ್ಷದ ಬಾಲಕಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story
07:28 PM (IST) Dec 26

Karnataka News Live 26th December:Breaking - ಬಿಕ್ಲು ಶಿವ ಕೊಲೆ ಕೇಸ್ ಬೈರತಿಗೆ ರಿಲೀಫ್, ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು

ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್‌.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
Read Full Story
07:14 PM (IST) Dec 26

Karnataka News Live 26th December:Bigg Boss - ಶಾಲೆಗೆ ಹೋಗಿದ್ದ ಸ್ಪಂದನಾ ರಾತ್ರಿ 10 ಗಂಟೆಯಾದ್ರೂ ಪತ್ತೆಯಿಲ್ಲ! ಆ ಕರಾಳ ದಿನ ನೆನೆದ ಅಪ್ಪ

ಬಿಗ್‌ಬಾಸ್ ಮನೆಗೆ ಸ್ಪಂದನಾ ಅವರ ಪಾಲಕರು ಆಗಮಿಸಿದ್ದಾರೆ. ಈ ವೇಳೆ, ಸ್ಪಂದನಾ ಅವರ ತಂದೆ ಮಗಳ ಶಾಲಾ ದಿನಗಳ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದು, ರಾತ್ರಿ 10 ಗಂಟೆಯಾದರೂ ಶಾಲೆಯಿಂದ ಮನೆಗೆ ಬಾರದಿದ್ದ ಕ್ಷಣವನ್ನು ವಿವರಿಸಿದ್ದಾರೆ.
Read Full Story
07:02 PM (IST) Dec 26

Karnataka News Live 26th December:ಫೇಕ್ ನ್ಯೂಸ್ ಹರಡಿದರೇ ಐಟಿ ಸಚಿವ ಪ್ರಿಯಾಂಕ್ ಖರ್ಗೆ? - ಬಿಜೆಪಿ ಕಿಡಿ, ಬೇಷರತ್ ಕ್ಷಮೆಗೆ ಆಗ್ರಹ

ಐಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಧಾನಿ ಮೋದಿಯವರನ್ನು ಟೀಕಿಸಲು ಎಐ-ಸೃಷ್ಟಿತ ನಕಲಿ ಚಿತ್ರವನ್ನು ಬಳಸಿದ್ದಾರೆಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ನಡೆ 'ದ್ವೇಷ ಭಾಷಣ ತಡೆ ಬಿಲ್'ನ ಉಲ್ಲಂಘನೆಯಾಗಿದ್ದು, ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

Read Full Story
06:42 PM (IST) Dec 26

Karnataka News Live 26th December:ಉಡುಪಿ ಕೃಷ್ಣನಿಗೆ 'ಪಾರ್ಥಸಾರಥಿ' ಸುವರ್ಣ ರಥ ಸಮರ್ಪಣೆ; ಮಳೆಗಾಲದಲ್ಲೂ ನಡೆಯಲಿದೆ ರಥೋತ್ಸವ!

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸ ಜೀವನದ 50ನೇ ವರ್ಷದ ಸಾರ್ಥಕ ಕ್ಷಣದ ನೆನಪಿಗಾಗಿ ಉಡುಪಿ ಶ್ರೀಕೃಷ್ಣನಿಗೆ 'ಪಾರ್ಥಸಾರಥಿ ಸುವರ್ಣ ರಥ' ಸಮರ್ಪಣೆಯಾಗುತ್ತಿದೆ. ಅಷ್ಟಮಠಗಳಿಗೆ ಸರಿಸಮನಾಗಿ ಎಂಟನೇ ರಥವಾಗಿ ಸೇರ್ಪಡೆಯಾಗುತ್ತಿರುವ ಈ ರಥವನ್ನು ಮಳೆಗಾಲದಲ್ಲೂ ಎಳೆಯಬಹುದಾಗಿದೆ.

Read Full Story
06:26 PM (IST) Dec 26

Karnataka News Live 26th December:ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸ್ಫೋಟ ಮೃತರ ಸಂಖ್ಯೆ 2ಕ್ಕೆ ಏರಿಕೆ; ಗಾಯಾಳು ಮಂಜುಳಾ ಕೊನೆಯುಸಿರು!

ಮೈಸೂರು ಅರಮನೆ ಮುಂಭಾಗ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಎರಡಕ್ಕೇರಿದೆ. ಗಂಭೀರವಾಗಿ ಗಾಯಗೊಂಡಿದ್ದ ನಂಜನಗೂಡು ಮೂಲದ ಮಂಜುಳಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ದುರಂತದ ಕುರಿತು ಪೊಲೀಸರು ನಿರ್ಲಕ್ಷ್ಯತನದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story
06:10 PM (IST) Dec 26

Karnataka News Live 26th December:ಹಂಪಿ - ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದ ಫ್ರಾನ್ಸ್ ಪ್ರಜೆ; ಎರಡು ದಿನಗಳ ಕಾಲ ನರಳಾಡಿದ್ದ ಪ್ರವಾಸಿಗನ ರಕ್ಷಣೆ!

ವಿಶ್ವವಿಖ್ಯಾತ ಹಂಪಿಯಲ್ಲಿ, ಫ್ರಾನ್ಸ್ ಮೂಲದ ಪ್ರವಾಸಿಗರೊಬ್ಬರು ಗುಡ್ಡ ಹತ್ತುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡರು. ಸುಮಾರು ಎರಡು ದಿನಗಳ ಕಾಲ ನೋವಿನಿಂದ ನರಳಿದ ನಂತರ, ಸ್ಥಳೀಯ ರೈತರು ಮತ್ತು ಅಧಿಕಾರಿಗಳು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Read Full Story
06:04 PM (IST) Dec 26

Karnataka News Live 26th December:ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಅಗ್ನಿ ಅವಘಡ - ಹೆರಿಗೆ & ಮಕ್ಕಳ ಘಟಕ ಚೆಲುವಾಂಬದಲ್ಲಿ 20 ಹಾಸಿಗೆ ಭಸ್ಮ!

ಮೈಸೂರಿನ ಕೆ.ಆರ್. ಆಸ್ಪತ್ರೆಯ ಚೆಲುವಾಂಬ ವಾರ್ಡ್ ಬಳಿ ನವೀಕರಣ ಕಾಮಗಾರಿಯ ವೇಳೆ ವೆಲ್ಡಿಂಗ್ ಕಿಡಿಯಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಹಳೆಯ ಹಾಸಿಗೆಗಳು ಸುಟ್ಟುಹೋಗಿದ್ದು, ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Read Full Story
06:01 PM (IST) Dec 26

Karnataka News Live 26th December:ಗಿಲ್ಲಿ ನಟನನ್ನು ಉಳಿಸೋಕೆ Bigg Boss ಪ್ಲ್ಯಾನ್‌ ಮಾಡಿದ್ದಾರೆ - ಲೈಟ್‌ ಆಫ್‌ ಆದ್ಮೇಲೆ ಸೂರಜ್‌, ರಕ್ಷಿತಾ ಗುಸು ಗುಸು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನಿಗೆ ಎಲ್ಲರೂ ಪ್ರತಿಸ್ಪರ್ಧಿಗಳೇ. ಆಟದ ವಿಚಾರಕ್ಕೋ ಇನ್ಯಾವುದೋ ವಿಚಾರಕ್ಕೋ ಗಿಲ್ಲಿ ಕೂಡ ಅನೇಕರ ಜೊತೆ ಜಗಳ ಆಡಿದ್ದುಂಟು, ವಾದ-ವಿವಾದದಲ್ಲಿ ಭಾಗಿ ಆಗಿದ್ದುಂಟು. ಆದರೆ ಆ ಸ್ಪರ್ಧಿಗಳ ಮನೆಯವರು ಗಿಲ್ಲಿ ಪರವಾಗಿರೋದು ವಿಶೇಷವಾಗಿದೆ.

Read Full Story