12:01 AM (IST) Jan 18

Karnataka News Live 17 January 2026ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!

Magadi Fire Tragedy ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಹಚ್ಚಿದ ಬೆಂಕಿ ಸಮೀಪದ ನೀಲಗಿರಿ ತೋಪಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳ ಬರುವ ಮುನ್ನವೇ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಬೆಂಕಿಯನ್ನು ನಂದಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

Read Full Story
10:32 PM (IST) Jan 17

Karnataka News Live 17 January 2026ವಿದ್ಯಾರ್ಥಿಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಶಿಕ್ಷಕನಿಗೆ 3 ವರ್ಷ ಜೈಲು ಶಿಕ್ಷೆ

ಚಾಮರಾಜನಗರದ ಹನೂರು ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ, ತನ್ನ ವಿದ್ಯಾರ್ಥಿಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದೆ. ಈ ಹೇಯ ಕೃತ್ಯಕ್ಕಾಗಿ ಕೊಳ್ಳೇಗಾಲದ ನ್ಯಾಯಾಲಯವು ಆರೋಪಿ ಶಿಕ್ಷಕನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
Read Full Story
09:49 PM (IST) Jan 17

Karnataka News Live 17 January 2026ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್, ಟಿಪ್ಪರ್ ಎರಡು ಬಾರಿ ಡಿಕ್ಕಿ ಹಿಂದೆ ಅನುಮಾನ

ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್, ಮೇಲ್ನೋಟಕ್ಕೆ ಸಹಜ ಅಪಘಾತದಂತೆ ಕಂಡರೂ ಉದ್ದೇಶಪೂರ್ವಕವಾಗಿ ಅಪಘಾತ ನಡೆಸಲಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಅಪಘಾತ ಕುರಿತು ದೂರು ದಾಖಲಾಗಿದೆ.

Read Full Story
09:01 PM (IST) Jan 17

Karnataka News Live 17 January 2026ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸರ್ಕಾರದ ಅನುಮತಿ, ಕಂಡೀಷನ್ ಏನು?

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸರ್ಕಾರದ ಅನುಮತಿ,, ಕಾಲ್ತುಳಿತದಿಂದ ಸ್ಥಗಿತಗೊಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಮರು ಜೀವ ಸಿಕ್ಕಿದೆ. ಸರ್ಕಾರ ಇದೀಗ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅನುಮತಿ ನೀಡಿದೆ.

Read Full Story
08:07 PM (IST) Jan 17

Karnataka News Live 17 January 2026ಗದಗ - ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ದಿನವಿಡೀ ಗೆಜ್ಜೆ ಶಬ್ಧ! ದೇವಿ ಕೋಪ ಶಮನಕ್ಕೆ ಊರವರಿಂದ ಮಹತ್ವದ ನಿರ್ಧಾರ

ಗದಗ ಜಿಲ್ಲೆಯ ದೇವಸ್ಥಾನದಲ್ಲಿ ರಾತ್ರಿ ವೇಳೆ ನಿಗೂಢ ಗೆಜ್ಜೆ ಶಬ್ಧ ಕೇಳಿಬರುತ್ತಿದೆ. ದುರ್ಗಮ್ಮ ದೇವಸ್ಥಾನದಲ್ಲಿ ಬೆಂಕಿ ಅವಘಡದ ನಂತರ ದೇವಿಯರ ಮೂರ್ತಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದ್ದು, ಅಂದಿನಿಂದ ಈ ಶಬ್ಧ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.

Read Full Story
07:21 PM (IST) Jan 17

Karnataka News Live 17 January 2026ಚಿಕ್ಕಮಗಳೂರು - ರಾಟ್‌ವೀಲರ್ ನಾಯಿ vs ನಾಗರಹಾವು ಮಧ್ಯೆ ಭೀಕರ ಕಾಳಗ, ಹಾವು ಕೊಂದು ಪ್ರಾಣಬಿಟ್ಟ ಶ್ವಾನ! ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ರಾಟ್‌ವೀಲರ್ ನಾಯಿ ಮತ್ತು ನಾಗರಹಾವಿನ ನಡುವೆ ಭೀಕರ ಕಾಳಗ ನಡೆದಿದೆ. ತನ್ನ ಮಾಲೀಕರನ್ನು ರಕ್ಷಿಸಲು ಹೋರಾಡಿದ ನಾಯಿ, ಹಾವನ್ನು ಕೊಂದರೂ, ಹಾವಿನ ವಿಷದಿಂದ ತಾನೂ ಪ್ರಾಣ ಬಿಟ್ಟಿದೆ. ಈ ದುರಂತ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. 

Read Full Story
06:37 PM (IST) Jan 17

Karnataka News Live 17 January 2026ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಸಲು ಸಮಿತಿ ಗ್ರೀನ್ ಸಿಗ್ನಲ್

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತದಿಂದ ಬ್ರೇಕ್ ಬಿದ್ದಿದ್ದ ಪಂದ್ಯಗಳಿಗೆ ಮತ್ತೆ ಸರ್ಕಾರದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.KSCA ಅಧಿಕೃತ ಘೋಷಣೆ ಮಾಡಲಿದೆ.

Read Full Story
06:27 PM (IST) Jan 17

Karnataka News Live 17 January 2026ಫಿನಾಲೆ ಹೊತ್ತಲ್ಲೇ ಕಾವ್ಯಾ ಉಲ್ಟಾ ಹೊಡೆಯೋದಾ? ಆ ದಿನದ ಮಾತು ಮರೆತೋಯ್ತಾ? ಗಿಲ್ಲಿ ಫ್ಯಾನ್ಸ್​ ಬೇಸರ

ಬಿಗ್​ಬಾಸ್​ ಮನೆಯಲ್ಲಿ ಆರಂಭದಲ್ಲಿ ಗಿಲ್ಲಿ ನಟನ ಜೊತೆ ಒಟ್ಟಾಗಿ ಇರುವುದಾಗಿ ಹೇಳಿದ್ದ ಕಾವ್ಯಾ ಶೈವ, ಇದೀಗ ತನ್ನ ಮದುವೆಗೆ ಗಿಲ್ಲಿಯೇ ಅಡ್ಡಿ ಎಂದು ಹೇಳಿಕೆ ನೀಡಿದ್ದಾರೆ. ಗಿಲ್ಲಿ ಅಭಿಮಾನಿಗಳು, ಮೊದಲ ದಿನದ ವಿಡಿಯೋವನ್ನು ಸೋಷಿಯಲ್ ಹಂಚಿಕೊಂಡು ಬೇಸರಿಸುತ್ತಿದ್ದಾರೆ.

Read Full Story
06:27 PM (IST) Jan 17

Karnataka News Live 17 January 2026ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾ ಬಲೆಗೆ ಬಿದ್ದ ಅಬಕಾರಿ ಅಧಿಕಾರಿಗಳ ಪ್ರಕರಣಕ್ಕೆ ಟ್ವಿಸ್ಟ್, ಸಚಿವ ತಿಮ್ಮಾಪುರ ಹೆಸರು ಬಹಿರಂಗ!

ಬೆಂಗಳೂರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರ ಲಕ್ಷ್ಮೀ ನಾರಾಯಣ್ ಅವರು ಈ ಪ್ರಕರಣದಲ್ಲಿ ಅಬಕಾರಿ ಸಚಿವ ಬಿ. ತಿಮ್ಮಾಪುರ ಅವರ ಪಾತ್ರದ ಬಗ್ಗೆಯೂ ಗಂಭೀರ ಆರೋಪ ಮಾಡಿದ್ದಾರೆ, ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

Read Full Story
06:23 PM (IST) Jan 17

Karnataka News Live 17 January 2026ಕೊಡಗು - ಈಜಲು ಹೋದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು

ಕುಶಾಲನಗರದ ಸುಂಟಿಕೊಪ್ಪ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನೀರಿನ ಆಳ ಅರಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಕಾಲೇಜು ಮುಗಿಸಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದ್ದು, ಪೊಲೀಸರು, ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

Read Full Story
05:51 PM (IST) Jan 17

Karnataka News Live 17 January 202688 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು ಬೇಲಿಯೇ ಹೊಲ ಮೇಯ್ದರೆ? ಪೊಲೀಸರಿಗೆ ಸಿಎಂ ಖಡಕ್ ಸಂದೇಶ

ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಪೊಲೀಸರೇ ಅಪರಾಧಗಳಲ್ಲಿ ಶಾಮೀಲಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೈಬರ್ ಅಪರಾಧ ಮತ್ತು ಡ್ರಗ್ಸ್ ದಂಧೆಯನ್ನು ಮಟ್ಟಹಾಕಿ ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಸೂಚಿಸಿದರು.

Read Full Story
05:49 PM (IST) Jan 17

Karnataka News Live 17 January 2026Bigg Bossನಲ್ಲಿ ಈ ಬಾರಿ ದಾಖಲೆಯ 37 ಕೋಟಿ ವೋಟ್​ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿಯ ವಿಷ್ಯ ರಿವೀಲ್​

ಕನ್ನಡ ಬಿಗ್​ಬಾಸ್​ ಈ ಬಾರಿ 37 ಕೋಟಿಗೂ ಅಧಿಕ ಮತಗಳನ್ನು ಪಡೆದು ಹೊಸ ಇತಿಹಾಸ ಸೃಷ್ಟಿಸಿದೆ. ಈ ವಿಷಯವನ್ನು ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಅತಿ ಕಡಿಮೆ ಮತಗಳ ಅಂತರವಿದೆ ಎಂದು ತಿಳಿಸಿದ್ದಾರೆ. 

Read Full Story
05:33 PM (IST) Jan 17

Karnataka News Live 17 January 2026ಮನಸ್ಸಿನಲ್ಲಿ ಅಂದುಕೊಳ್ಳೋದೆಲ್ಲ ಅಷ್ಟದಿಕ್ಕಿನಿಂದ ನಡೆಯುತ್ತಿದೆ; ಗಿಲ್ಲಿ ನಟ ಜಪಿಸುವ ರಹಸ್ಯ ಮಂತ್ರ ಯಾವುದು?

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದಾರೆ. ಗಿಲ್ಲಿ ನಟ ಅವರು ಏನು ಅಂದುಕೊಂಡಿರೋದೆಲ್ಲ ಆಗುತ್ತಿದೆ. ಇದಕ್ಕೆ ಕಾರಣ ಏನು? ಇದರ ಹಿಂದಿನ ಮಂತ್ರ ಯಾವುದು?

Read Full Story
05:23 PM (IST) Jan 17

Karnataka News Live 17 January 2026Bigg Boss ಸ್ಪರ್ಧಿಗಳ ಪರ ಅಖಾಡಕ್ಕಿಳಿದ ಸಚಿವರು ಶಾಸಕರು! ಯಾರಿಗೆ ಯಾವ ರಾಜಕಾರಣಿ ಬೆಂಬಲ?

ಬಿಗ್​ಬಾಸ್​ ಕನ್ನಡ 12ರ ಫಿನಾಲೆ ಅಭೂತಪೂರ್ವ ಪ್ರಚಾರಕ್ಕೆ ಸಾಕ್ಷಿಯಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಸೇರಿದಂತೆ ಫೈನಲಿಸ್ಟ್‌ಗಳ ಪರವಾಗಿ ಶಾಸಕರು ಮತ್ತು ಮಾಜಿ ಸಚಿವರೇ ಅಖಾಡಕ್ಕಿಳಿದು ಬೆಂಬಲ ವ್ಯಕ್ತಪಡಿಸುತ್ತಿದ್ದು, ಇದು ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲ ಬಾರಿ ಎನ್ನಲಾಗಿದೆ. 

Read Full Story
05:09 PM (IST) Jan 17

Karnataka News Live 17 January 2026ಬಳ್ಳಾರಿ ಲೂಟಿ, 'ಡ್ಯಾಡಿ' ರಾಜಕೀಯ - ಎದುರಾಳಿಗಳ ವಿರುದ್ಧ ಡೈಲಾಗ್ ಹೊಡೆದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ!

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಳ್ಳಾರಿ ಲೂಟಿ, ಜನಾರ್ದನ ರೆಡ್ಡಿ ಸೇರ್ಪಡೆ, ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳನ್ನು ಖಂಡಿಸಿದ ಅವರು, ಪಕ್ಷಾಂತರಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು.

Read Full Story
05:06 PM (IST) Jan 17

Karnataka News Live 17 January 2026ತುತ್ತು ಅನ್ನ ತಿನ್ನೋಕೆ ಜೈಲಲ್ಲಿ ಪವಿತ್ರಾ ಗೌಡ ಪರದಾಟ! ದರ್ಶನ್ ಚಳಿ ತಡೆಯೋದಕ್ಕೆ ಆಗ್ತಿಲ್ಲ ಅಂದ್ರು ಪೊಲೀಸರು ಡೋಂಟ್ ಕೇರ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ಪವಿತ್ರಾ ಗೌಡಗೆ ಕೋರ್ಟ್ ಅನುಮತಿ ನೀಡಿದರೂ ಮನೆಯೂಟ ಸಿಗುತ್ತಿಲ್ಲ. ಜೈಲಾಧಿಕಾರಿಗಳು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸಿದ್ದು, ಪವಿತ್ರಾ ಜೈಲಿನಲ್ಲೇ ಪರದಾಡುವಂತಾಗಿದೆ.

Read Full Story
05:06 PM (IST) Jan 17

Karnataka News Live 17 January 2026ಗದಗ - ಬಸ್ ರಶ್ ಇದೆ ಹತ್ತಬೇಡಿ ಎಂದಿದ್ದಕ್ಕೆ ಕುಡುಕನ ಕಿರಿಕ್; '50 ಮಂದಿಗಷ್ಟೇ ಅವಕಾಶ ಎಲ್ಲರನ್ನ ಕೆಳಗಿಳಿಸಿ' ಎಂದ ಭೂಪ!

ಗದಗ ನಗರದ ಬಸ್ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ, ಬಸ್ ಹತ್ತಲು ಬಿಡಲಿಲ್ಲವೆಂದು ರಾದ್ಧಾಂತ ಸೃಷ್ಟಿಸಿದ್ದಾನೆ. ಬಸ್‌ನಲ್ಲಿ ಹೆಚ್ಚು ಜನರಿದ್ದಾರೆಂದು ಆರೋಪಿಸಿ, ಬಸ್‌ನ ಚಕ್ರದ ಮುಂದೆ ಮಲಗಿ ಪ್ರತಿಭಟಿಸಿ, ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಹೈರಾಣಾದರು.

Read Full Story
04:39 PM (IST) Jan 17

Karnataka News Live 17 January 2026ಗಿಲ್ಲಿ ನಟನ ಹೆಸರಲ್ಲಿ ಮತ್ತೊಂದು ದಾಖಲೆ - Bigg Boss ಇನ್​ಸ್ಟಾಗ್ರಾಮ್​ನಲ್ಲಿಯೂ ಗೆದ್ದು ಬೀಗಿದ ಗಿಲ್ಲಿ

ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ನಟ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ತಮ್ಮ ವೈಯಕ್ತಿಕ ಖಾತೆ ಮಾತ್ರವಲ್ಲದೆ, ಕಲರ್ಸ್ ವಾಹಿನಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇವರು ಕಾಣಿಸಿಕೊಂಡ ಮೂರು ಪ್ರೊಮೋಗಳು 1 ಮಿಲಿಯನ್‌ಗೂ ಅಧಿಕ ಲೈಕ್ಸ್ ಪಡೆದು ಹೊಸ ಇತಿಹಾಸ ಸೃಷ್ಟಿಸಿವೆ.
Read Full Story
04:34 PM (IST) Jan 17

Karnataka News Live 17 January 2026KSRTC ಬಸ್‌ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ಬಿಗ್ ಶಾಕ್, 8 ಲಕ್ಷಕ್ಕೂ ಅಧಿಕ ದಂಡ ವಸೂಲಿ!

ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಇದನ್ನೇ ಬಳಸಿಕೊಂಡು ಟಿಕೆಟ್ ರಹಿತ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಕೆಎಸ್‌ಆರ್‌ಟಿಸಿಯಲ್ಲಿ 4,353 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ 8 ಲಕ್ಷಕ್ಕೂ ಅಧಿಕ ದಂಡ ವಸೂಲಿ.

Read Full Story
04:22 PM (IST) Jan 17

Karnataka News Live 17 January 2026ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಚಿಂತನೆ, ಪ್ರಯಾಣಿಕರ ಆಕ್ರೋಶ, ಹೋರಾಟದ ಎಚ್ಚರಿಕೆ ಕೊಟ್ಟ ಸಂಸದ ಸೂರ್ಯ

BMRCL ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇ.5ರಷ್ಟು ಹೆಚ್ಚಿಸಲು ಚಿಂತಿಸುತ್ತಿದ್ದು, ಇದು ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಂಸದ ತೇಜಸ್ವಿ ಸೂರ್ಯ ಈ ಕ್ರಮವನ್ನು ಖಂಡಿಸಿದ್ದು, ದರ ಏರಿಕೆ ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Read Full Story