12:02 AM (IST) Nov 14

karnataka news liveಬಾಗಲಕೋಟೆ - ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಎಸ್ಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ರಬಕವಿ ಬನಹಟ್ಟಿ ತಾಲೂಕಿನ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬೆಂಕಿ ಅವಘಡದ ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಬಾಗಲಕೋಟೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಗಂಭೀರವಾಗಿ ಗಾಯಗೊಂಡಿದ್ದು, ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Read Full Story
11:40 PM (IST) Nov 13

karnataka news liveಕಬ್ಬಿನ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ದೊಣ್ಣೆ ಹಿಡಿದು ಸಾಯಿ ಪ್ರಿಯಾ ಕಾರ್ಖಾನೆ ಕಾವಲಿಗೆ ನಿಂತ ರೈತರು!

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿನ ಬಾಕಿ ಮತ್ತು ನ್ಯಾಯಯುತ ಬೆಲೆಗಾಗಿ ಪ್ರತಿಭಟಿಸುತ್ತಿದ್ದ ರೈತರ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿದ್ದು, ಘಟನೆಯಿಂದ ಜಮಖಂಡಿ ಮುಧೋಳ ಭಾಗದ ರೈತರ ನಡುವೆ ಆಕ್ರೋಶ ಭುಗಿಲೆದ್ದಿದೆ.

Read Full Story
11:04 PM (IST) Nov 13

karnataka news liveವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಿದ ಟೆಕ್ನಿಕಲ್ ಗುರೂಜಿ

ವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಿದ ಟೆಕ್ನಿಕಲ್ ಗುರೂಜಿ , ಚಿನ್ನ ಲೇಪಿತ ಈ ಐಫೋನ್‌ ಹಿಂಭಾಗದಲ್ಲಿ ಶ್ರೀರಾಮ ಹಾಗೂ ಹನುಮಾನ್ ಫೋಟೋ ಫ್ರೇಮ್ ಇದೆ. ಇಷ್ಟೇ ಅಲ್ಲ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.

Read Full Story
10:41 PM (IST) Nov 13

karnataka news liveಬೆಂಗಳೂರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ - ಸಫಾರಿ ಬಸ್ ಮೇಲೆ ಚಿರತೆ ಹಠಾತ್ ದಾಳಿ, ಮಹಿಳೆ ಕೈಗೆ ಗಾಯ! ವಿಡಿಯೋ ವೈರಲ್

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿ ವೇಳೆ ಚಿರತೆಯೊಂದು ಸಫಾರಿ ಬಸ್ ಮೇಲೆ ಹಾರಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
10:05 PM (IST) Nov 13

karnataka news liveಬಾಲಿವುಡ್ ನಟ ಧರ್ಮೇಂದ್ರ ಹೆಲ್ತ್ ಅಪ್‌ಡೇಟ್ ಪ್ರಕರಣ, ಪೊಲೀಸರಿಂದ ಆಸ್ಪತ್ರೆ ಉದ್ಯೋಗಿ ಅರೆಸ್ಟ್

ಬಾಲಿವುಡ್ ನಟ ಧರ್ಮೇಂದ್ರ ಹೆಲ್ತ್ ಅಪ್‌ಡೇಟ್ ಪ್ರಕರಣ, ಪೊಲೀಸರಿಂದ ಆಸ್ಪತ್ರೆ ಉದ್ಯೋಗಿ ಅರೆಸ್ಟ್ , ಅಷ್ಟಕ್ಕೂ ಧರ್ಮೇಂದ್ರ ಆರೋಗ್ಯ ಪ್ರಕರಣಕ್ಕೂ ಆಸ್ಪತ್ರೆ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ? ಈ ಬೆಳವಣಿಗೆಗೆ ಕಾರಣವೇನು?

Read Full Story
09:59 PM (IST) Nov 13

karnataka news liveಕಾರವಾರ - ಮೆಡಿಕಲ್ ವಿದ್ಯಾರ್ಥಿಗಳ ಬುಲೆಟ್ ಬೈಕ್ ಸ್ಕೂಟಿಗೆ ಡಿಕ್ಕಿ, ಮಗ ಕಣ್ಮುಂದೆ ಸಾವು, ತಾಯಿ ಗಂಭೀರ ಗಾಯ!

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ 15 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯುವಕನ ತಾಯಿ ಹಾಗೂ ಬುಲೆಟ್ ಸವಾರರಾದ ಮೆಡಿಕಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story
09:00 PM (IST) Nov 13

karnataka news liveರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ

ರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ, ರೈತರ ಪ್ರತಿಭಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, 50ಕ್ಕೂ ಹೆಚ್ಚು ಟ್ರಾಕ್ಟರ್ ಬೆಂಕಿಗೆ ಆಹುತಿಯಾಗಿದೆ. ಇತ್ತ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

Read Full Story
08:00 PM (IST) Nov 13

karnataka news liveಹಾರ್ನ್ ಮಾಡಿದ್ದಕ್ಕೆ ಟೆಕ್ಕಿಯಿಂದ ಹಿಟ್‌ ಅಂಡ್ ರನ್, ಆರೋಪಿ ಬಂಧನ, ಸಿಸಿಟೀವಿಲಿ ಶಾಕಿಂಗ್ ದೃಶ್ಯ!

Techie hit and run case ಬೆಂಗಳೂರಿನಲ್ಲಿ ರಸ್ತೆ ಗಲಾಟೆಯಿಂದ ಕುಪಿತಗೊಂಡ ಸಾಫ್ಟ್‌ವೇರ್ ಇಂಜಿನಿಯರ್, ದಂಪತಿ ಹಾಗೂ ಮಗು ಸಂಚರಿಸುತ್ತಿದ್ದ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಭಯಾನಕ ಕೃತ್ಯ. ಆತನನ್ನು ಕೊಲೆಯತ್ನ ಪ್ರಕರಣದಡಿ ಬಂಧಿಸಲಾಗಿದೆ.

Read Full Story
07:35 PM (IST) Nov 13

karnataka news liveಕುಶಾಲನಗರ ಜಾನುವಾರು ಜಾತ್ರೆ - ಕಾರಿನ ಬೆಲೆಯನ್ನು ಮೀರಿಸಿದ ಹಳ್ಳಿಕಾರ್ ಹೋರಿಗಳ ಬೆಲೆ!

ಕುಶಾಲನಗರ ಗಣಪತಿ ರಥೋತ್ಸವದ ಅಂಗವಾಗಿ ನಡೆದ ಜಾನುವಾರು ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹೋರಿಗಳು ಪ್ರದರ್ಶನಗೊಂಡವು. ಮೈಸೂರು, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ರೈತರು ತಮ್ಮ ಅಮೃತ್ ಮಹಲ್, ಹಳ್ಳಿಕಾರ್ ತಳಿಯ ಹೋರಿಗಳನ್ನು ಪ್ರದರ್ಶಿಸಿದರು.

Read Full Story
07:31 PM (IST) Nov 13

karnataka news liveಅಬ್ಬಬ್ಬಾ! ಚಾನೆಲ್​ ವಿರುದ್ಧವೇ ಗುಡುಗಿದ Bigg Boss ಜಾಹ್ನವಿ - ದೊಡ್ಮನೆಯಲ್ಲಿ ಅಂಥದ್ದೇನಾಯ್ತು ನೋಡಿ!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಜಾಹ್ನವಿ, ವಾಹಿನಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸ್ಪಂದನಾ ಸೋಮಣ್ಣ ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವೀಕ್ಷಕರ ವೋಟ್ ಇಲ್ಲದೆ ವಾಹಿನಿಯೇ ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದು, ಈ ಹೇಳಿಕೆಯು ಇದೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story
07:17 PM (IST) Nov 13

karnataka news liveನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!

ಪವರ್ ಬ್ಯಾಂಕ್‌ಗಳು ಮೊಬೈಲ್ ಚಾರ್ಜಿಂಗ್‌ಗೆ ಅತ್ಯಗತ್ಯವಾಗಿದ್ದರೂ, ಕೆಲವು ಅಪಾಯಕಾರಿ ಸಂಕೇತಗಳನ್ನು ನೀಡಬಹುದು. ಬ್ಯಾಟರಿ ಊತ, ಅತಿಯಾದ ಬಿಸಿ, ವಾಸನೆ ಅಥವಾ ಔಟ್‌ಪುಟ್ ಸಮಸ್ಯೆಗಳಂತಹ ಚಿಹ್ನೆಗಳು ಕಂಡರೆ, ಅದು ಸ್ಫೋಟದಂತಹ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story
07:02 PM (IST) Nov 13

karnataka news liveಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ

ಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ, ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳಿಗೆ ರೈತರು ಬೆಂಕಿ ಹಚ್ಚಿದ್ದಾರೆ. ಸಮೀರವಾಡಿ ಕಾರ್ಖಾನೆ ಆವರಣದಲ್ಲಿ ಈ ಘಟನೆ ನಡೆದಿದೆ.

Read Full Story
06:44 PM (IST) Nov 13

karnataka news liveಜೆಡಿಎಸ್‌ನಿಂದ ಶಾಸಕನಾದಾಗ ಕಾಂಗ್ರೆಸ್ ಮುಗಿಸಿದ್ದೆ, ಆ ಸಂದರ್ಭ ಮತ್ತೆ ಬರಬಹುದು, ಸ್ವಪಕ್ಷದ ವಿರುದ್ಧ ರಾಜಣ್ಣ ಮತ್ತೆ ಗುಡುಗು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತುಮಕೂರಿನಲ್ಲಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2004ರಲ್ಲಿ ತಾನು ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ಗೆ 'ವೈಟ್ ವಾಶ್' ಮಾಡಿದ್ದೆ. ಅಂತಹ ಸಂದರ್ಭ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Read Full Story
06:35 PM (IST) Nov 13

karnataka news liveಮಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ

ಮಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ, ಸಮೀರವಾಡಿ ಕಬ್ಬು ಕಾರ್ಖಾನೆಯತ್ತ ನೂರಾರು ರೈತರು ನುಗ್ಗಿದ್ದಾರೆ. ಇತ್ತ ಟ್ರಾಕ್ಟರ್ ಹೊತ್ತಿ ಉರಿದಿದೆ.

Read Full Story
06:29 PM (IST) Nov 13

karnataka news liveBigg Boss ರಕ್ಷಿತಾ ಶೆಟ್ಟಿಯ ಯುಟ್ಯೂಬ್​ ಆದಾಯ ಇದೀಗ ರಿವೀಲ್​! ಇಷ್ಟು ಸಿಕ್ಕಿದ್ಯಾ?

ಬಿಗ್​ಬಾಸ್​ ಮನೆಯಲ್ಲಿ ಸದ್ದು ಮಾಡುತ್ತಿರುವ ರಕ್ಷಿತಾ ಶೆಟ್ಟಿ, ತಮ್ಮ ವಿಭಿನ್ನ ಭಾಷಾ ಶೈಲಿಯಿಂದಲೇ ಜನಪ್ರಿಯರಾಗಿದ್ದಾರೆ. ಮುಂಬೈನಲ್ಲಿ ಬೆಳೆದರೂ ಕರಾವಳಿ ಅಡುಗೆ ವಿಡಿಯೋಗಳಿಂದ ಫೇಮಸ್ ಆಗಿರುವ ಅವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story
06:01 PM (IST) Nov 13

karnataka news liveಚಿತ್ತಾಪುರ - ಆರೆಸ್ಸೆಸ್‌ಗೆ ಅನುಮತಿ, ನಮಗೇಕಿಲ್ಲ? ಅದೇ ದಿನ ಸೇರುತ್ತೇವೆ ಎಂದ ಭೀಮ್ ಅರ್ಮಿ!

ಕಲಬುರಗಿ ಹೈಕೋರ್ಟ್‌ನಿಂದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕ ಬೆನ್ನಲ್ಲೇ, ಇದೇ ದಿನದಂದು ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಭೀಮ್ ಆರ್ಮಿ ಸಂಘಟನೆ ಪಟ್ಟು ಹಿಡಿದಿದೆ. ಅನುಮತಿ ಸಿಗದಿದ್ದರೂ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.

Read Full Story
05:42 PM (IST) Nov 13

karnataka news liveಡೆಮೋ ರೀತಿ ಲಿಂಗ ಬೇಕಾ? ವರ್ಕಿಂಗ್ ರೀತಿ ಬೇಕಾ? ಆಪರೇಷನ್​ನ ಶಾಕಿಂಗ್​ ಮಾಹಿತಿ ಕೊಟ್ಟ transgender

 ತೃತೀಯ ಲಿಂಗಿಯರು ಲಿಂಗ ಪರಿವರ್ತನೆಗೆ ಒಳಗಾಗುವಾಗ ಎದುರಿಸುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ. ಈ ಶಸ್ತ್ರಚಿಕಿತ್ಸೆಯು ಅತ್ಯಂತ ದುಬಾರಿ ಮತ್ತು ನೋವಿನಿಂದ ಕೂಡಿದ್ದು, ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಅವರು ಅನುಭವಿಸುವ ಸಂಕಷ್ಟಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.

Read Full Story
05:29 PM (IST) Nov 13

karnataka news live'ಕಾಂಗ್ರೆಸ್‌ನವ್ರಿಗೆ ಸ್ವಲ್ಪವೂ ಮಾನ-ಮಾರ್ಯಾದೆ ಅನ್ನೋದೇ ಇಲ್ಲ' ದೆಹಲಿ ಸ್ಫೋಟದ ಬಗ್ಗೆ ರಾಯರಡ್ಡಿ ಹೇಳಿಕೆಗೆ ಕೆರಳಿದ ಶ್ರೀರಾಮುಲು -

ದೆಹಲಿ ಸ್ಪೋಟದ ಕುರಿತ ಬಸವರಾಜ ರಾಯರಡ್ಡಿ ಅವರ ಹೇಳಿಕೆಗೆ ಮಾಜಿ ಸಚಿವ ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ಗಮನಹರಿಸುವಂತೆ ಕಾಂಗ್ರೆಸ್‌ಗೆ ಸವಾಲು.

Read Full Story
04:56 PM (IST) Nov 13

karnataka news liveದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ - ತುಮಕೂರಿನಲ್ಲಿ ಶಂಕಿತನ ವಿಚಾರಣೆ, ಯಾರು ಈ ಮುಜಾಯುದ್ದೀನ್?

ದೆಹಲಿಯ ಕೆಂಪುಕೋಟೆ ಬಳಿಯ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಮುಜಾಯುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಿಂದೆ 'ಕಲಿಫತ್' ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಈತನಿಗೆ, ಪ್ರಸ್ತುತ ಸ್ಫೋಟ ಸಂಬಂಧ ವಿಚಾರಣೆ ನಡೆಸಿ ಬಿಟ್ಟುಕಳಿಸಲಾಗಿದೆ.

Read Full Story
04:56 PM (IST) Nov 13

karnataka news liveಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಮುಸ್ಲಿಮರು - ಕ್ಷೇತ್ರದ ಅಪಪ್ರಚಾರ ಮಾಡ್ತಿರೋರಿಗೆ ತನ್ವೀರ್​ ಹೇಳಿದ್ದೇನು?

ಧರ್ಮಸ್ಥಳದ ಕುರಿತ ಅಪಪ್ರಚಾರಗಳ ನಡುವೆಯೂ, ಧರ್ಮಭೇದವಿಲ್ಲದೆ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ, ತನ್ವೀರ್ ಅಹಮ್ಮದ್ ನೇತೃತ್ವದ ಮುಸ್ಲಿಂ ತಂಡವೊಂದು ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಭೇಟಿ ನೀಡಿ, ಇದು ಸರ್ವಧರ್ಮೀಯರ ಕ್ಷೇತ್ರ ಎಂದು ಸಾರಿದೆ.
Read Full Story