10:00 PM (IST) Jul 01

Karnataka News Live 1 July 2026ಶಿವಣ್ಣ ಫ್ಯಾನ್ಸ್‌ಗೆ ಸಿಕ್ತು ಬಿಗ್ ಅಪ್‌ಡೇಟ್ - 'ಡ್ಯಾಡ್' ಸಿನಿಮಾದಿಂದ ಬಂತು ಭರ್ಜರಿ ಗುಡ್ ನ್ಯೂಸ್!

ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಹಲವು ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ಚಿತ್ರದ ಬಗ್ಗೆ ನಿರ್ದೇಶಕ ಅನಿಲ್ ಕನ್ನೆಗಂಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story
08:57 PM (IST) Jul 01

Karnataka News Live 1 July 2026Toxic Star Cast Fees - ಯಶ್‌ನಿಂದ ರುಕ್ಮಿಣಿ ವಸಂತ್‌ವರೆಗೆ, ಯಾರು ಎಷ್ಟು ಕೋಟಿ ಸಂಭಾವನೆ ಪಡೆದ್ರು?

'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಹೊಸ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ತಾರಾಗಣದ ಸಂಭಾವನೆ ಕುರಿತು ವರದಿಗಳು ವೈರಲ್ ಆಗಿವೆ.

Read Full Story
08:39 PM (IST) Jul 01

Karnataka News Live 1 July 2026ಮೊದಲ ಬಾರಿಗೆ ಕಿರುತೆರೆಗೆ ಬಿ.ಸಿ ಪಾಟೀಲ್ ಎಂಟ್ರಿ - ಇದು 'ಶ್ರೀ ರಾಘವೇಂದ್ರ ಮಹಾತ್ಮೆ'ಯ ಪವಾಡ!

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮತ್ತೊಂದು ಪವಾಡ ಅನಾವರಣಗೊಳ್ಳಲಿದೆ. ಸತ್ತ ಮಗುವಿಗೆ ಪುನರ್ಜೀವ ನೀಡುವ ರೋಚಕ ಪ್ರಸಂಗದ ಜೊತೆಗೆ ಹಿರಿಯ ನಟ ಬಿ.ಸಿ ಪಾಟೀಲ್ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

Read Full Story
08:31 PM (IST) Jul 01

Karnataka News Live 1 July 2026ಆಘಾತಕಾರಿ ಸುದ್ದಿ ಬಿಚ್ಟಿಟ್ಟ ಸ್ನೇಹಿತೆ; 'ಲೈಫ್‌ಲಾಂಗ್ ಅದನ್ನೆಲ್ಲಾ ಮಾಡೋ ಹಾಗಿಲ್ಲ ಸಮಂತಾ'..!

'ಮಾ ಇಂಟಿ ಬಂಗಾರಂ' ಚಿತ್ರದ ಶೂಟಿಂಗ್ ವೇಳೆ ಸಮಂತಾರ ವೃತ್ತಿಪರತೆ, ಬದ್ಧತೆ ಕಂಡು ಇಡೀ ಚಿತ್ರತಂಡವೇ ದಂಗಾಗಿತ್ತು. ಸಾಮಾನ್ಯವಾಗಿ ಸಾಹಸ ದೃಶ್ಯಗಳಿಗೆ ಸ್ಟಂಟ್ ಡ್ಯೂಪ್‌ಗಳನ್ನು ಬಳಸಲಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್‌ನ ಕಠಿಣ ಆಕ್ಷನ್ ದೃಶ್ಯಗಳಲ್ಲಿ ಸಮಂತಾ ‘ನನಗೆ ಡ್ಯೂಪ್ ಬೇಡ, ನಾನೇ ಸ್ವತಃ ಮಾಡುತ್ತೇನೆ’ ಎಂದು ಪಟ್ಟು ಹಿಡಿದು ಆಕ್ಷನ್ ಸನ್ನಿವೇಶಗಳನ್ನು ಮಾಡಿದ್ದಾರಂತೆ

Read Full Story
07:40 PM (IST) Jul 01

Karnataka News Live 1 July 2026’BOSS’ ಚಿತ್ರ ನಮ್ಮ ಮೇಲೆ ಪ್ರಭಾವ ಬೀರುತ್ತೆ ಅಂದುಕೊಂಡ್ರಾ? ದರ್ಶನ್‌ ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್

ನಟ ದರ್ಶನ್ ಪ್ರಕರಣವನ್ನು ಹೋಲುವ 'ಬಾಸ್' ಚಿತ್ರದ ಬಿಡುಗಡೆಗೆ ತಡೆ ಕೋರಿ ವಿಜಯಲಕ್ಷ್ಮಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರವು ನ್ಯಾಯಯುತ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ವಕೀಲರ ವಾದಕ್ಕೆ, ಸಿನಿಮಾ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
Read Full Story
07:18 PM (IST) Jul 01

Karnataka News Live 1 July 2026ಯಶ್ 'ಟಾಕ್ಸಿಕ್'ನಲ್ಲಿ ಬೋಲ್ಡ್ ದೃಶ್ಯಗಳು - ಹೊಸ ಟೀಸರ್ ನೋಡಿದ ಅಭಿಮಾನಿಗಳ ಆತಂಕವೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೋಲ್ಡ್ ದೃಶ್ಯಗಳು ಮತ್ತು ಆಕ್ಷನ್ ಸನ್ನಿವೇಶಗಳ ನಡುವೆಯೇ CBFC ಪ್ರಮಾಣಪತ್ರ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

Read Full Story
06:30 PM (IST) Jul 01

Karnataka News Live 1 July 2026ಕನ್ನಡ ಚಿತ್ರರಂಗದ ಸಂಕಷ್ಟಕ್ಕೆ ಸರ್ಕಾರದ ಪರಿಹಾರ ಸಿಗುತ್ತಾ? ಎಲ್ಲರ ಕಣ್ಣು ಸಿಎಂ ಡಿಕೆಶಿ ಕಡೆ!

ಕನ್ನಡ ಚಿತ್ರರಂಗ ಉಳಿವಿಗಾಗಿ ಹೊಸ ಚಲನಚಿತ್ರ ನೀತಿ, ಸರ್ಕಾರಿ OTT ವೇದಿಕೆ, ಚಿತ್ರಮಂದಿರಗಳ ಅಭಿವೃದ್ಧಿ, ಆರ್ಕೈವ್, ಚಿತ್ರನಗರಿಗೆ 500 ಕೋಟಿ ಅನುದಾನ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದೆ.

Read Full Story
05:40 PM (IST) Jul 01

Karnataka News Live 1 July 2026ಬಡ್ತಿಯ ಸಿಹಿ ಸವಿಯುವ ಮುನ್ನವೇ ಪೊಲೀಸ್ ಅಧಿಕಾರಿಗೆ ಎದುರಾಯ್ತು ಕಂಟಕ! ಮಾರ್ಗ ಮಧ್ಯಯೇ ಕೊನೆಯುಸಿರೆಳೆದ ಎಎಸ್‌ಐ

ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಬಡ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಮಾರ್ಗಮಧ್ಯೆಯೇ ಈ ದುರಂತ ಸಂಭವಿಸಿದೆ.

Read Full Story
05:40 PM (IST) Jul 01

Karnataka News Live 1 July 2026'ಕ್ಷಮೆ' ಕಾದಂಬರಿ ಹೇಗೆ 'ಅಮೆರಿಕಾ ಅಮೆರಿಕಾ 2' ಆಯಿತು? ಮತ್ತೆ ಅದೇ ಮ್ಯಾಜಿಕ್ ಮಾಡ್ತಾರಾ ನಾಗತಿಹಳ್ಳಿ ಚಂದ್ರಶೇಖರ್!

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟೈಟಲ್ ಅಧಿಕೃತವಾಗಿ ಅನಾವರಣಗೊಂಡಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ನಟಿಸಿರುವ ಈ ಸಿನಿಮಾ 'ಕ್ಷಮೆ' ಕಾದಂಬರಿ ಆಧಾರಿತವಾಗಿದೆ.

Read Full Story
05:18 PM (IST) Jul 01

Karnataka News Live 1 July 2026ಅರೆರೆ.. 'ಗಿಚ್ಚಿ ಗಿಲಿಗಿಲಿ' ಪ್ರಶಾಂತ್‌ ಮದುವೆ ಕಾರ್ಡ್ ನೋಡಿ ಅಚ್ಚರಿಗೊಂಡ ಮೇಘನಾ ರಾಜ್‌!

'Gichchi Giligili' ಖ್ಯಾತಿಯ ಪ್ರಶಾಂತ್ ಗೌಡ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ನಟಿ ಮೇಘನಾ ರಾಜ್‌ಗೆ ನೀಡಿ ಆಹ್ವಾನಿಸಿದರು. ವಿಶಿಷ್ಟ ವಿನ್ಯಾಸದ ವೆಡ್ಡಿಂಗ್ ಕಾರ್ಡ್ ನೋಡಿ ಮೇಘನಾ ರಾಜ್ ಅಚ್ಚರಿಗೊಂಡು ಶುಭ ಹಾರೈಸಿದರು.

Read Full Story
04:56 PM (IST) Jul 01

Karnataka News Live 1 July 2026Chitradurga - ಕುಸಿದುಬಿದ್ದು ಹಠಾತ್‌ ಸಾವನ್ನಪ್ಪಿದ ಚಿತ್ರದುರ್ಗದ ಡಿಆರ್‌ಎಫ್ಒ ವೆಂಕಟೇಶ್

ಹಿರಿಯೂರು ತಾಲೂಕಿನ ಡಿಆರ್‌ಎಫ್‌ಒ ಆಗಿದ್ದ ವೆಂಕಟೇಶ್ (40) ಚಿತ್ರದುರ್ಗದ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ದರಿಂದ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Read Full Story
04:39 PM (IST) Jul 01

Karnataka News Live 1 July 2026ನಟ ಅಜೇಯ್ ರಾವ್‌ಗೆ 'ಪಾರ್ಟ್‌ನರ್' ಸಿಕ್ಕರು - ಏನಿದು ಲವ್, ಬ್ರೇಕಪ್, ಲಿವ್-ಇನ್ ನಂತರದ ನಿಜವಾದ ಸಂಬಂಧ!

Partner Kannada Movie: 'ಮಳೆ', 'ಧೈರ್ಯಂ', 'ದಿಲ್ ಪಸಂದ್' ಬಳಿಕ ನಿರ್ದೇಶಕ ಶಿವತೇಜಸ್ ನಿರ್ದೇಶಿಸಿರುವ 'ಪಾರ್ಟ್‌ನರ್' ಚಿತ್ರದಲ್ಲಿ ಅಜೇಯ್ ರಾವ್, ಬೃಂದಾ ಆಚಾರ್ಯ ಹಾಗೂ ರಂಗಾಯಣ ರಘು ಅಭಿನಯಿಸಿದ್ದಾರೆ. 

Read Full Story
04:38 PM (IST) Jul 01

Karnataka News Live 1 July 2026ಡೇಟ್‌ಗೆ ಹೋದ ಬೆಂಗಳೂರು ಯುವತಿಗೆ ಈಗ ಸಮಸ್ಯೆ, 4 ವರ್ಷ ಬಳಿಕ ಆನ್‌ಲೈನ್‌ನಲ್ಲಿ ಇಂಟಿಮೇಟ್ ವಿಡಿಯೋ ಪತ್ತೆ

ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಬೆಂಗಳೂರು ಯುವತಿ ಡೇಟಿಂಗ್ ಮಾಡಿದ್ದಾಳೆ. ಇವರಿಬ್ಬರ ಡೇಟಿಂಗ್ ಕೆಲವೇ ದಿನ ಮಾತ್ರ ಇತ್ತು. ಅದರಲ್ಲೇ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಎಲ್ಲಾ ರಿಲೇಶನ್‌ಶಿಪ್, ಕಾಂಟಾಕ್ಟ್ ಕಟ್ ಆಗಿತ್ತು. ಆದರೆ ನಾಲ್ಕು ವರ್ಷ ಬಳಿಕ ಆತನ ಜೊತೆಗಿನ ಇಂಟಿಮೇಟ್ ವಿಡಿಯೋ ಆನ್‌ಲೈನ್‌ನಲ್ಲಿ ಪತ್ತೆಯಾಗಿದೆ.

Read Full Story
04:35 PM (IST) Jul 01

Karnataka News Live 1 July 2026Yash Toxic - ಐವರು ನಾಯಕಿಯರಿಗೆ ವಾರ್ನಿಂಗ್ ಕೊಟ್ರಾ 'ರಾಯ'..? ಒಟ್ಟಿಗೇ ಬಂದ್ರೂ 'OK' ಅಂತ ಗಟ್ಸ್ ತೋರಿಸಿದ ಯಶ್!

‘ಟಾಕ್ಸಿಕ್’ ಚಿತ್ರವು ಕೇವಲ ಗನ್ ಮತ್ತು ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಿಗೆ ಮಹಿಳಾ ಶಕ್ತಿಯನ್ನು ಹೊಸ ಆಯಾಮದಲ್ಲಿ ತೋರಿಸುವ ಸಿನಿಮಾ ಆಗಲಿದೆಯೇ ಎಂಬ ಸಂಶಯ ಈ ಟೀಸರ್‌ನಿಂದ ಸೃಷ್ಟಿಯಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರವು 26 ಆಗಸ್ಟ್ 2026 ರಂದು ತೆರೆಗೆ ಬರಲಿದೆ.

Read Full Story
04:16 PM (IST) Jul 01

Karnataka News Live 1 July 2026'ಅಪರ್ಣಾಳನ್ನು ಹೊತ್ತೊಯ್ಯುವ ತೇರು ನಾನು' - ಭಾವುಕರಾದ ನಾಗರಾಜ ವಸ್ತಾರೆ

ಅಪರ್ಣಾ ವಸ್ತಾರೆ ಅವರನ್ನು ನೆನೆದು ಸಾಹಿತಿ ನಾಗರಾಜ ವಸ್ತಾರೆ ಭಾವುಕರಾದರು. ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಅವಳು ನನ್ನೊಳಗೇ ಇದ್ದಾಳೆ' ಎಂದ ಅವರ ಮಾತು ಎಲ್ಲರ ಮನಮುಟ್ಟಿತು.

Read Full Story
04:12 PM (IST) Jul 01

Karnataka News Live 1 July 2026ಸೇನೆಯ ಬತ್ತಳಿಕೆಗೆ ಸೇರಲಿದೆ ಎಂದೂ ಖಾಲಿಯಾಗದ ಅನಂತ ಶಸ್ತ್ರ QRSAM Air Defence, ಚೀನಾ-ಪಾಕ್‌ಗೆ ನಡುಕ!

ಭಾರತವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 'ಅನಂತ ಶಸ್ತ್ರ' (QRSAM) ಕ್ಷಿಪಣಿ ವ್ಯವಸ್ಥೆಯನ್ನು ಸೇನೆಗೆ ಸೇರ್ಪಡೆಗೊಳಿಸಲು ಸಜ್ಜಾಗಿದೆ. DRDO ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು, ಹಳೆಯ 'OSA-AK' ಬದಲಿಗೆ ಶತ್ರುಗಳ ಡ್ರೋನ್, ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲಿದೆ.

Read Full Story
03:41 PM (IST) Jul 01

Karnataka News Live 1 July 2026ರಾಕಿಂಗ್ ಸ್ಟಾರ್‌ ಗೆ 8ರ ನಂಟು? ಯಶ್ 'ಟಾಕ್ಸಿಕ್' ನಂಬರ್ 8ರ ಗಂಟು ಬಿಡಿಸಿದ ಫ್ಯಾನ್ಸ್ಏ! ನಿದರ ಗುಟ್ಟು?

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯ ಸಮಯವು ಅವರ ಅದೃಷ್ಟದ ಸಂಖ್ಯೆ 8ರೊಂದಿಗೆ ಸಂಬಂಧ ಹೊಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಶನಿ ಮತ್ತು ಶುಕ್ರ ಗ್ರಹಗಳನ್ನು ಪ್ರತಿನಿಧಿಸುವ 8 ಮತ್ತು 6 ಸಂಖ್ಯೆಗಳು ಯಶ್ ಅವರ 'ಕೆಜಿಎಫ್' ನಿಂದ 'ಟಾಕ್ಸಿಕ್' ವರೆಗಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಲೇಖನವು ಯಶ್ ಅವರ ವೃತ್ತಿಜೀವನದಲ್ಲಿ ಈ ಸಂಖ್ಯೆಗಳ ಮಹತ್ವವನ್ನು ವಿವರಿಸುತ್ತದೆ.
Read Full Story
03:22 PM (IST) Jul 01

Karnataka News Live 1 July 2026Cricket - ವೈಭವ್‌ಗೆ ಬೆದರಿತಾ ಇಂಗ್ಲೆಂಡ್? ವೈಭವ್ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂತು ಬಿಗ್‌ ನ್ಯೂಸ್!

ಐಪಿಎಲ್‌ನಲ್ಲಿ ಮಿಂಚಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಂಭಾವ್ಯ ಪಾದಾರ್ಪಣೆಯು ಇಂಗ್ಲೆಂಡ್ ತಂಡಕ್ಕೆ ಚಿಂತೆಗೀಡುಮಾಡಿದೆ. ಆದರೆ ಡ್ರೆಸ್ಸಿಂಗ್‌ ರೂಂನಲ್ಲಿ ನಡೆದಿದ್ದೇನು ಗೊತ್ತಾ?

Read Full Story
02:24 PM (IST) Jul 01

Karnataka News Live 1 July 2026Yash Toxic - ಯಾವುದರಲ್ಲೂ ರುಕ್ಮಿಣಿಗೆ 'ಹೀರೋ' ಸಿಗಲ್ಲ.. ಸೋ, ರೊಚ್ಚಿಗೆದ್ದು ಗನ್ ತಗೊಂಡ್ರಾ 'ಸಪ್ತ ಸಾಗರ'ದ ಚಲುವೆ?

ನಟಿ ರುಕ್ಮಿಣಿ ವಸಂತ್ ಅವರಿಗೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ತೀರಾ ವಿಭಿನ್ನ ಎಂಬಂತೆ ರೆಬೆಲ್ ಲೇಡಿ ರೋಲ್ ಸಿಕ್ಕಿದೆ. ಇಡೀ ಸಿನಿಮಾದಲ್ಲೇ ಅವರಿಗೆ ಅಂತಹ ಪಾತ್ರವೋ ಅಥವಾ ಅದು ಒಂದು ಸೀನ್ ಅಷ್ಟೇನಾ ಎಂಬುದು ಸಿನಿಮಾ ತೆರೆಗೆ ಬಂದ ಬಳಿಕವಷ್ಟೇ ತಿಳಿಯಲಿದೆ!

Read Full Story
01:20 PM (IST) Jul 01

Karnataka News Live 1 July 2026ಬಿಡದಿ ಟೌನ್‌ಶಿಪ್ ಯೋಜನೆಗೆ ತಡೆ ಕೋರಿ ಹೈಕೋರ್ಟ್‌ಗೆ ಪಿಐಎಲ್, ಪರಿಸರ ಹಾನಿಯ ಗಂಭೀರ ಆರೋಪ

ಬೆಂಗಳೂರಿನ ಹೊರವಲಯದಲ್ಲಿ ಉದ್ದೇಶಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' (ಬಿಡದಿ ಟೌನ್‌ಶಿಪ್) ಯೋಜನೆಗಾಗಿ 516 ಎಕರೆಗೂ ಅಧಿಕ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯು ಭೂಸ್ವಾಧೀನ ಕಾಯ್ದೆಯ ಉಲ್ಲಂಘನೆ, ಪ್ರಾದೇಶಿಕ ಅಸಮತೋಲನ ಮತ್ತು ಪರಿಸರ ನಾಶದಂತಹ ಗಂಭೀರ ಆರೋಪಗಳನ್ನು ಮಾಡಿದೆ.
Read Full Story