ಡಾ. ಶಿವರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಹಲವು ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ಚಿತ್ರದ ಬಗ್ಗೆ ನಿರ್ದೇಶಕ ಅನಿಲ್ ಕನ್ನೆಗಂಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
- Home
- News
- State
- Karnataka News Live: ಶಿವಣ್ಣ ಫ್ಯಾನ್ಸ್ಗೆ ಸಿಕ್ತು ಬಿಗ್ ಅಪ್ಡೇಟ್ - 'ಡ್ಯಾಡ್' ಸಿನಿಮಾದಿಂದ ಬಂತು ಭರ್ಜರಿ ಗುಡ್ ನ್ಯೂಸ್!
Karnataka News Live: ಶಿವಣ್ಣ ಫ್ಯಾನ್ಸ್ಗೆ ಸಿಕ್ತು ಬಿಗ್ ಅಪ್ಡೇಟ್ - 'ಡ್ಯಾಡ್' ಸಿನಿಮಾದಿಂದ ಬಂತು ಭರ್ಜರಿ ಗುಡ್ ನ್ಯೂಸ್!

ಧಾರವಾಡ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡಲು ಮೂರನೇ ಬಾರಿಗೆ ಇಲ್ಲಿಯ ಹೈಕೋರ್ಟ್ ಪೀಠವು ನಿರಾಕರಿಸಿದೆ. ಆರೋಪಿ ಫಯಾಜ್ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಎಂ.ಹತ್ತರಕಿ, ಜಾಮೀನು ನೀಡುವಂತೆ ನ್ಯಾಯಪೀಠದ ಎದುರು ಮನವಿ ಮಾಡಿದರು.
ನೇಹಾ ಪರವಾಗಿ ವಾದಿಸಿದ ವಕೀಲ ರಾಘವೇಂದ್ರ ಮುತ್ತಗೀಕರ, ಆರೋಪಿ ಮಾಡಿರುವ ಕೊಲೆಯು ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಗೆ ಶಿಕ್ಷೆ ಪ್ರಕಟವಾಗುವ ವರೆಗೂ ಜಾಮೀನು ನೀಡದಿರುವಂತೆ ಪ್ರತಿವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
Karnataka News Live 1 July 2026ಶಿವಣ್ಣ ಫ್ಯಾನ್ಸ್ಗೆ ಸಿಕ್ತು ಬಿಗ್ ಅಪ್ಡೇಟ್ - 'ಡ್ಯಾಡ್' ಸಿನಿಮಾದಿಂದ ಬಂತು ಭರ್ಜರಿ ಗುಡ್ ನ್ಯೂಸ್!
Karnataka News Live 1 July 2026Toxic Star Cast Fees - ಯಶ್ನಿಂದ ರುಕ್ಮಿಣಿ ವಸಂತ್ವರೆಗೆ, ಯಾರು ಎಷ್ಟು ಕೋಟಿ ಸಂಭಾವನೆ ಪಡೆದ್ರು?
'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಹೊಸ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ತಾರಾಗಣದ ಸಂಭಾವನೆ ಕುರಿತು ವರದಿಗಳು ವೈರಲ್ ಆಗಿವೆ.
Karnataka News Live 1 July 2026ಮೊದಲ ಬಾರಿಗೆ ಕಿರುತೆರೆಗೆ ಬಿ.ಸಿ ಪಾಟೀಲ್ ಎಂಟ್ರಿ - ಇದು 'ಶ್ರೀ ರಾಘವೇಂದ್ರ ಮಹಾತ್ಮೆ'ಯ ಪವಾಡ!
ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮತ್ತೊಂದು ಪವಾಡ ಅನಾವರಣಗೊಳ್ಳಲಿದೆ. ಸತ್ತ ಮಗುವಿಗೆ ಪುನರ್ಜೀವ ನೀಡುವ ರೋಚಕ ಪ್ರಸಂಗದ ಜೊತೆಗೆ ಹಿರಿಯ ನಟ ಬಿ.ಸಿ ಪಾಟೀಲ್ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
Karnataka News Live 1 July 2026ಆಘಾತಕಾರಿ ಸುದ್ದಿ ಬಿಚ್ಟಿಟ್ಟ ಸ್ನೇಹಿತೆ; 'ಲೈಫ್ಲಾಂಗ್ ಅದನ್ನೆಲ್ಲಾ ಮಾಡೋ ಹಾಗಿಲ್ಲ ಸಮಂತಾ'..!
'ಮಾ ಇಂಟಿ ಬಂಗಾರಂ' ಚಿತ್ರದ ಶೂಟಿಂಗ್ ವೇಳೆ ಸಮಂತಾರ ವೃತ್ತಿಪರತೆ, ಬದ್ಧತೆ ಕಂಡು ಇಡೀ ಚಿತ್ರತಂಡವೇ ದಂಗಾಗಿತ್ತು. ಸಾಮಾನ್ಯವಾಗಿ ಸಾಹಸ ದೃಶ್ಯಗಳಿಗೆ ಸ್ಟಂಟ್ ಡ್ಯೂಪ್ಗಳನ್ನು ಬಳಸಲಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್ನ ಕಠಿಣ ಆಕ್ಷನ್ ದೃಶ್ಯಗಳಲ್ಲಿ ಸಮಂತಾ ‘ನನಗೆ ಡ್ಯೂಪ್ ಬೇಡ, ನಾನೇ ಸ್ವತಃ ಮಾಡುತ್ತೇನೆ’ ಎಂದು ಪಟ್ಟು ಹಿಡಿದು ಆಕ್ಷನ್ ಸನ್ನಿವೇಶಗಳನ್ನು ಮಾಡಿದ್ದಾರಂತೆ
Karnataka News Live 1 July 2026’BOSS’ ಚಿತ್ರ ನಮ್ಮ ಮೇಲೆ ಪ್ರಭಾವ ಬೀರುತ್ತೆ ಅಂದುಕೊಂಡ್ರಾ? ದರ್ಶನ್ ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್
Karnataka News Live 1 July 2026ಯಶ್ 'ಟಾಕ್ಸಿಕ್'ನಲ್ಲಿ ಬೋಲ್ಡ್ ದೃಶ್ಯಗಳು - ಹೊಸ ಟೀಸರ್ ನೋಡಿದ ಅಭಿಮಾನಿಗಳ ಆತಂಕವೇನು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೋಲ್ಡ್ ದೃಶ್ಯಗಳು ಮತ್ತು ಆಕ್ಷನ್ ಸನ್ನಿವೇಶಗಳ ನಡುವೆಯೇ CBFC ಪ್ರಮಾಣಪತ್ರ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
Karnataka News Live 1 July 2026ಕನ್ನಡ ಚಿತ್ರರಂಗದ ಸಂಕಷ್ಟಕ್ಕೆ ಸರ್ಕಾರದ ಪರಿಹಾರ ಸಿಗುತ್ತಾ? ಎಲ್ಲರ ಕಣ್ಣು ಸಿಎಂ ಡಿಕೆಶಿ ಕಡೆ!
ಕನ್ನಡ ಚಿತ್ರರಂಗ ಉಳಿವಿಗಾಗಿ ಹೊಸ ಚಲನಚಿತ್ರ ನೀತಿ, ಸರ್ಕಾರಿ OTT ವೇದಿಕೆ, ಚಿತ್ರಮಂದಿರಗಳ ಅಭಿವೃದ್ಧಿ, ಆರ್ಕೈವ್, ಚಿತ್ರನಗರಿಗೆ 500 ಕೋಟಿ ಅನುದಾನ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದೆ.
Karnataka News Live 1 July 2026ಬಡ್ತಿಯ ಸಿಹಿ ಸವಿಯುವ ಮುನ್ನವೇ ಪೊಲೀಸ್ ಅಧಿಕಾರಿಗೆ ಎದುರಾಯ್ತು ಕಂಟಕ! ಮಾರ್ಗ ಮಧ್ಯಯೇ ಕೊನೆಯುಸಿರೆಳೆದ ಎಎಸ್ಐ
ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಬಡ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಮಾರ್ಗಮಧ್ಯೆಯೇ ಈ ದುರಂತ ಸಂಭವಿಸಿದೆ.
Karnataka News Live 1 July 2026'ಕ್ಷಮೆ' ಕಾದಂಬರಿ ಹೇಗೆ 'ಅಮೆರಿಕಾ ಅಮೆರಿಕಾ 2' ಆಯಿತು? ಮತ್ತೆ ಅದೇ ಮ್ಯಾಜಿಕ್ ಮಾಡ್ತಾರಾ ನಾಗತಿಹಳ್ಳಿ ಚಂದ್ರಶೇಖರ್!
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟೈಟಲ್ ಅಧಿಕೃತವಾಗಿ ಅನಾವರಣಗೊಂಡಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ನಟಿಸಿರುವ ಈ ಸಿನಿಮಾ 'ಕ್ಷಮೆ' ಕಾದಂಬರಿ ಆಧಾರಿತವಾಗಿದೆ.
Karnataka News Live 1 July 2026ಅರೆರೆ.. 'ಗಿಚ್ಚಿ ಗಿಲಿಗಿಲಿ' ಪ್ರಶಾಂತ್ ಮದುವೆ ಕಾರ್ಡ್ ನೋಡಿ ಅಚ್ಚರಿಗೊಂಡ ಮೇಘನಾ ರಾಜ್!
'Gichchi Giligili' ಖ್ಯಾತಿಯ ಪ್ರಶಾಂತ್ ಗೌಡ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ನಟಿ ಮೇಘನಾ ರಾಜ್ಗೆ ನೀಡಿ ಆಹ್ವಾನಿಸಿದರು. ವಿಶಿಷ್ಟ ವಿನ್ಯಾಸದ ವೆಡ್ಡಿಂಗ್ ಕಾರ್ಡ್ ನೋಡಿ ಮೇಘನಾ ರಾಜ್ ಅಚ್ಚರಿಗೊಂಡು ಶುಭ ಹಾರೈಸಿದರು.
Karnataka News Live 1 July 2026Chitradurga - ಕುಸಿದುಬಿದ್ದು ಹಠಾತ್ ಸಾವನ್ನಪ್ಪಿದ ಚಿತ್ರದುರ್ಗದ ಡಿಆರ್ಎಫ್ಒ ವೆಂಕಟೇಶ್
ಹಿರಿಯೂರು ತಾಲೂಕಿನ ಡಿಆರ್ಎಫ್ಒ ಆಗಿದ್ದ ವೆಂಕಟೇಶ್ (40) ಚಿತ್ರದುರ್ಗದ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ದರಿಂದ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Karnataka News Live 1 July 2026ನಟ ಅಜೇಯ್ ರಾವ್ಗೆ 'ಪಾರ್ಟ್ನರ್' ಸಿಕ್ಕರು - ಏನಿದು ಲವ್, ಬ್ರೇಕಪ್, ಲಿವ್-ಇನ್ ನಂತರದ ನಿಜವಾದ ಸಂಬಂಧ!
Partner Kannada Movie: 'ಮಳೆ', 'ಧೈರ್ಯಂ', 'ದಿಲ್ ಪಸಂದ್' ಬಳಿಕ ನಿರ್ದೇಶಕ ಶಿವತೇಜಸ್ ನಿರ್ದೇಶಿಸಿರುವ 'ಪಾರ್ಟ್ನರ್' ಚಿತ್ರದಲ್ಲಿ ಅಜೇಯ್ ರಾವ್, ಬೃಂದಾ ಆಚಾರ್ಯ ಹಾಗೂ ರಂಗಾಯಣ ರಘು ಅಭಿನಯಿಸಿದ್ದಾರೆ.
Karnataka News Live 1 July 2026ಡೇಟ್ಗೆ ಹೋದ ಬೆಂಗಳೂರು ಯುವತಿಗೆ ಈಗ ಸಮಸ್ಯೆ, 4 ವರ್ಷ ಬಳಿಕ ಆನ್ಲೈನ್ನಲ್ಲಿ ಇಂಟಿಮೇಟ್ ವಿಡಿಯೋ ಪತ್ತೆ
ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಬೆಂಗಳೂರು ಯುವತಿ ಡೇಟಿಂಗ್ ಮಾಡಿದ್ದಾಳೆ. ಇವರಿಬ್ಬರ ಡೇಟಿಂಗ್ ಕೆಲವೇ ದಿನ ಮಾತ್ರ ಇತ್ತು. ಅದರಲ್ಲೇ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಎಲ್ಲಾ ರಿಲೇಶನ್ಶಿಪ್, ಕಾಂಟಾಕ್ಟ್ ಕಟ್ ಆಗಿತ್ತು. ಆದರೆ ನಾಲ್ಕು ವರ್ಷ ಬಳಿಕ ಆತನ ಜೊತೆಗಿನ ಇಂಟಿಮೇಟ್ ವಿಡಿಯೋ ಆನ್ಲೈನ್ನಲ್ಲಿ ಪತ್ತೆಯಾಗಿದೆ.
Karnataka News Live 1 July 2026Yash Toxic - ಐವರು ನಾಯಕಿಯರಿಗೆ ವಾರ್ನಿಂಗ್ ಕೊಟ್ರಾ 'ರಾಯ'..? ಒಟ್ಟಿಗೇ ಬಂದ್ರೂ 'OK' ಅಂತ ಗಟ್ಸ್ ತೋರಿಸಿದ ಯಶ್!
‘ಟಾಕ್ಸಿಕ್’ ಚಿತ್ರವು ಕೇವಲ ಗನ್ ಮತ್ತು ಗ್ಯಾಂಗ್ಸ್ಟರ್ ಕಥೆಯಲ್ಲ, ಬದಲಿಗೆ ಮಹಿಳಾ ಶಕ್ತಿಯನ್ನು ಹೊಸ ಆಯಾಮದಲ್ಲಿ ತೋರಿಸುವ ಸಿನಿಮಾ ಆಗಲಿದೆಯೇ ಎಂಬ ಸಂಶಯ ಈ ಟೀಸರ್ನಿಂದ ಸೃಷ್ಟಿಯಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರವು 26 ಆಗಸ್ಟ್ 2026 ರಂದು ತೆರೆಗೆ ಬರಲಿದೆ.
Karnataka News Live 1 July 2026'ಅಪರ್ಣಾಳನ್ನು ಹೊತ್ತೊಯ್ಯುವ ತೇರು ನಾನು' - ಭಾವುಕರಾದ ನಾಗರಾಜ ವಸ್ತಾರೆ
ಅಪರ್ಣಾ ವಸ್ತಾರೆ ಅವರನ್ನು ನೆನೆದು ಸಾಹಿತಿ ನಾಗರಾಜ ವಸ್ತಾರೆ ಭಾವುಕರಾದರು. ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಅವಳು ನನ್ನೊಳಗೇ ಇದ್ದಾಳೆ' ಎಂದ ಅವರ ಮಾತು ಎಲ್ಲರ ಮನಮುಟ್ಟಿತು.
Karnataka News Live 1 July 2026ಸೇನೆಯ ಬತ್ತಳಿಕೆಗೆ ಸೇರಲಿದೆ ಎಂದೂ ಖಾಲಿಯಾಗದ ಅನಂತ ಶಸ್ತ್ರ QRSAM Air Defence, ಚೀನಾ-ಪಾಕ್ಗೆ ನಡುಕ!
ಭಾರತವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 'ಅನಂತ ಶಸ್ತ್ರ' (QRSAM) ಕ್ಷಿಪಣಿ ವ್ಯವಸ್ಥೆಯನ್ನು ಸೇನೆಗೆ ಸೇರ್ಪಡೆಗೊಳಿಸಲು ಸಜ್ಜಾಗಿದೆ. DRDO ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು, ಹಳೆಯ 'OSA-AK' ಬದಲಿಗೆ ಶತ್ರುಗಳ ಡ್ರೋನ್, ಹೆಲಿಕಾಪ್ಟರ್ಗಳನ್ನು ಹೊಡೆದುರುಳಿಸಲಿದೆ.
Karnataka News Live 1 July 2026ರಾಕಿಂಗ್ ಸ್ಟಾರ್ ಗೆ 8ರ ನಂಟು? ಯಶ್ 'ಟಾಕ್ಸಿಕ್' ನಂಬರ್ 8ರ ಗಂಟು ಬಿಡಿಸಿದ ಫ್ಯಾನ್ಸ್ಏ! ನಿದರ ಗುಟ್ಟು?
Karnataka News Live 1 July 2026Cricket - ವೈಭವ್ಗೆ ಬೆದರಿತಾ ಇಂಗ್ಲೆಂಡ್? ವೈಭವ್ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್ನಿಂದ ಹೊರಬಂತು ಬಿಗ್ ನ್ಯೂಸ್!
ಐಪಿಎಲ್ನಲ್ಲಿ ಮಿಂಚಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಂಭಾವ್ಯ ಪಾದಾರ್ಪಣೆಯು ಇಂಗ್ಲೆಂಡ್ ತಂಡಕ್ಕೆ ಚಿಂತೆಗೀಡುಮಾಡಿದೆ. ಆದರೆ ಡ್ರೆಸ್ಸಿಂಗ್ ರೂಂನಲ್ಲಿ ನಡೆದಿದ್ದೇನು ಗೊತ್ತಾ?
Karnataka News Live 1 July 2026Yash Toxic - ಯಾವುದರಲ್ಲೂ ರುಕ್ಮಿಣಿಗೆ 'ಹೀರೋ' ಸಿಗಲ್ಲ.. ಸೋ, ರೊಚ್ಚಿಗೆದ್ದು ಗನ್ ತಗೊಂಡ್ರಾ 'ಸಪ್ತ ಸಾಗರ'ದ ಚಲುವೆ?
ನಟಿ ರುಕ್ಮಿಣಿ ವಸಂತ್ ಅವರಿಗೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ತೀರಾ ವಿಭಿನ್ನ ಎಂಬಂತೆ ರೆಬೆಲ್ ಲೇಡಿ ರೋಲ್ ಸಿಕ್ಕಿದೆ. ಇಡೀ ಸಿನಿಮಾದಲ್ಲೇ ಅವರಿಗೆ ಅಂತಹ ಪಾತ್ರವೋ ಅಥವಾ ಅದು ಒಂದು ಸೀನ್ ಅಷ್ಟೇನಾ ಎಂಬುದು ಸಿನಿಮಾ ತೆರೆಗೆ ಬಂದ ಬಳಿಕವಷ್ಟೇ ತಿಳಿಯಲಿದೆ!